ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ ತಾಲೂಕು ತುಳು ಕೂಟ ಅಧ್ಯಕ್ಷರಾಗಿ ಮುಂದಿನ ಎರಡು ವರ್ಷದ ಅವಧಿಗೆ ಬಂಟ್ವಾಳ ಭೂ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್ ಪುನರಾಯ್ಕೆ ಆಗಿದ್ದಾರೆ.
ಬಂಟ್ವಾಳದಲ್ಲಿ ತುಳು ಕೂಟದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಉಪಸ್ಥಿತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಅವರನ್ನು ಕೂಟದ ಗೌರವಾಧ್ಯಕ್ಷರಾಗಿ ಪುನರಾಯ್ಕೆ ಮಾಡಲಾಯಿತು.
ನೂತನ ಕಾರ್ಯದರ್ಶಿಯಾಗಿ ಎಚ್ಕೆ ನಯನಾಡು, ಕೋಶಾಧಿಕಾರಿ ಕೆ.ಸುಭಾಶ್ಚಂದ್ರ ಜೈನ್ ಆಯ್ಕೆಗೊಂಡರು.ಪ್ರಧಾನ ಸಲಹೆಗಾರರಾಗಿ ಡಿ.ಎಂ. ಕುಲಾಲ್, ಮಂಜು ವಿಟ್ಲ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರಮೇಶ್ ನಾಕ್ ರಾಯಿ, ಸರಪಾಡಿ ಅಶೋಕ ಶೆಟ್ಟಿ, ಶಾರದಾ ಬಂಗೇರ, ಜೊತೆ ಕಾರ್ಯದರ್ಶಿ ಸೇಸಪ್ಪ ಮಾಸ್ಟರ್, ಸದಾಶಿವ ಪುತ್ರನ್, ಸಂಘಟನಾ ಕಾರ್ಯದರ್ಶಿಗಳಾಗಿ ಸೀತಾರಾಮ ಶೆಟ್ಟಿ, ದಿವಾಕರ ದಾಸ್, ಪ್ರಭಾಕರ ಪ್ರಭು, ರಾಧಾಕೃಷ್ಣ ರೈ, ಕ್ರೀಡಾ ಕಾರ್ಯದರ್ಶಿ ಸುಕುಮಾರ್ ಬಂಟ್ವಾಳ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮೋಹನ್ದಾಸ್ ಕೊಟ್ಟಾರಿ, ಸದಸ್ಯರಾಗಿ ಮುರಳೀಧರ ಶೆಟ್ಟಿ, ಪರಮೇಶ್ವರ ಎಂ., ಮನೋಜ್ ಆಳ್ವ, ಮಹಾಬರ ರೈ ಬರ್ಕೆಗುತ್ತು, ಚಂದ್ರಶೇಖರ ಗಟ್ಟಿ, ದೇವಪ್ಪ ಕುಲಾಲ್, ಸದಾನಂದ ಶೆಟ್ಟಿ ಪಂಜಿಕಲ್ಲು, ಮಧುಸೂದನ ಶೆಣೈ, ಮುತ್ತಪ್ಪ ಪೂಚಾರಿ ಚಂಡ್ತಿಮಾರ್, ವಾಸು ಮಾಸ್ಟರ್, ದಿನೇಶ್ ಶೆಟ್ಟಿ, ಗಣೇಶ್ ನಾಯಕ್, ಸತೀಶ್ ಕುಮಾರ್ ಕಾರ್ತಿಕ್ ಸ್ಟುಡಿಯೊ ಆಯ್ಕೆಯಾಗಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…