ಬಂಟ್ವಾಳ

ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ ಪೂರ್ವಬಾವಿ ಸಭೆ

ಯೋಗ ಅಭ್ಯಾಸಿಗಳ ಯೋಗಾಸನ ರಾಜ್ಯ ಮಟ್ಟದ ಸ್ಪರ್ಧೆಯನ್ನು ಬಿ.ಸಿ.ರೋಡ್‌ನಲ್ಲಿ ಮುಂದಿನ ಅಕ್ಟೋಬರ್ ಪ್ರಥಮ ವಾರದಲ್ಲಿ ಶಾಲಾ ಮಕ್ಕಳ ಬೇಸಿಗೆ ರಜೆಯ ಸಂದರ್ಭದ ಹಮ್ಮಿಕೊಳ್ಳಲು ಜು. 14ರಂದು ಬಿ.ಸಿ.ರೋಡ್ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಯಿತು.

ಜಾಹೀರಾತು

ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನ ರಿ. ಪ್ರಧಾನ ಕಾರ್ಯದರ್ಶಿ ಅಧ್ಯಕ್ಷ ಡಾ| ರಘುವೀರ ಅವಧಾನಿ ನೇತೃತ್ವದಲ್ಲಿ ಸಭೆ ನಡೆಯಿತು.

ಅಂತರಾಷ್ಟ್ರೀಯ ಯೋಗಪಟು ಮೋನಪ್ಪ ಪೂಜಾರಿ ಮಂಗಳೂರು ಅವರ ಮಾರ್ಗದರ್ಶನದಲ್ಲಿ ಸ್ಪರ್ಧೆ ನಡೆಯಲಿದೆ.

ಸುಮಾರು ಐದು ನೂರು ಮಂದಿ ಯೋಗಾಸನ ಸ್ಪರ್ಧಿಗಳನ್ನು ನಿರೀಕ್ಷಿಸಿದ್ದು, ಅವರಿಗೆ ಎರಡು ದಿನಗಳಲ್ಲಿ ವಿವಿಧ ವಿಭಾಗವಾರು ಸ್ಪರ್ಧೆಯನ್ನು ಯೋಜಿಸಿದೆ. ಪ್ರತಿ ಸ್ಪರ್ಧೆಯಲ್ಲಿ ಪಾಲ್ಗೊಂಡದ್ದಕ್ಕೆ ಸರ್ಟಿಫಿಕೇಟ್, ವಿಜೇತರಾದವರಿಗೆ ಶಾಶ್ವತ ಫಲಕ, ಸರ್ಟಿಫಿಕೇಟ್, ನಗದು ಪುರಸ್ಕಾರ ನೀಡುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.

ಪೂರ್ವಬಾವಿ ಸಭೆಯಲ್ಲಿ  ಪ್ರತಿಷ್ಠಾನದ ಅಧ್ಯಕ್ಷ ಡಾ| ಶಿವಪ್ರಸಾದ ಶೆಟ್ಟಿ, ಕೋಶಾಧಿಕಾರಿ ಡಾ| ಸುಬ್ರಹ್ಮಣ್ಯ ಭಟ್ ಟಿ., ಪ್ರಮುಖರಾದ ರಾಜಾ ಬಂಟ್ವಾಳ , ದಾಮೋದರ ರಾಮಕುಂಜ, ರಾಮಚಂದ್ರ ಭಟ್ ಮಂಗಳೂರು, ಗೀತಾ ಕಾರಂತ, ಪ್ರತಿಮಾ, ಮಂಜುನಾಥ ಪೈ ಮತ್ತು ಇತರ ಯೋಗಾಭ್ಯಾಸಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸಮಿತಿಯನ್ನು ರಚಿಸಲು ತಿಮಾನಿಸಲಾಯಿತು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.