ಸಜೀಪಮೂಡದಲ್ಲಿರುವ ಕಂದೂರು ಶ್ರೀಕೃಷ್ಣ ಶಿಶು ಮಂದಿರ ಹಾಗೂ ಸಜೀಪ ಮುನ್ನೂರಿನ ಶಾಂತಿನಗರ ಸರಕಾರಿ ಪ್ರಾಥಮಿಕ ಶಾಲೆ ವಠಾರದಲ್ಲಿ ಪುಟಾಣಿ ಮಕ್ಕಳ ಸಹಭಾಗಿತ್ವದಲ್ಲಿ ಶರತ್ ಮಡಿವಾಳ ನೆನೆಪಿಗಾಗಿ ಹುತಾತ್ಮ ಶರತ್ ಅಭಿಮಾನಿ ಬಳಗದ ವತಿಯಿಂದ ವನಮಹೋತ್ಸವ ಮತ್ತು ಪುಟಾಣಿ ಮಕ್ಕಳಿಗೆ ಕೊಡೆ ವಿತರಣೆ ಮಾಡುವ ಮೂಲಕ ಬಲಿದಾನ ದಿವಸವನ್ನಾಗಿ ಅಚರಿಸಲಾಯಿತು.
ಶ್ರೀಕೃಷ್ಣ ಶಿಶುಮಂದಿರ, ಶಾಂತಿನಗರ ಸರಕಾರಿ ಶಾಲೆ ಮತ್ತು ಶಾಂತಿನಗರ ಅಂಗನವಾಡಿ ಕೇಂದ್ರದ ಎಲ್ಲಾ ಮಕ್ಕಳಿಗೂ ಶರತ್ ಸವಿ ನೆನಪಿಗಾಗಿ ಕೊಡೆ ವಿತರಿಸಲಾಯಿತು. ಶರತ್ ಅವರ ತಂದೆ ತನಿಯಪ್ಪ ಮಡಿವಾಳ, ಧರ್ಮ ಜಾಗರಣ ಜಿಲ್ಲಾ ಸಂಯೋಜಕ್ ಸಚಿನ್ ಮೆಲ್ಕಾರ್, ಸಜೀಪ ಜನಸೇವಾ ಟ್ರಸ್ಟ್ ಅಧ್ಯಕ್ಷ ಯಶವಂತ ದೇರಾಜೆ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಇದರ ನಿರ್ದೇಶಕ ಪುರುಷೋತ್ತಮ ಸಾಲ್ಯಾನ್ ನರಿಕೊಂಬು, ವಿಶ್ವಹಿಂದೂ ಪರಿಷತ್ ವಿಟ್ಲ ಪ್ರಖಂಡದ ಕಾರ್ಯಾಧ್ಯಕ್ಷ ಪದ್ಮನಾಭ ವಿಟ್ಲ, ವಿಶ್ವ ಹಿಂದೂ ಪರಿಷತ್ ನಾಯಕ ಲೋಹಿತ್ ಪಣೋಲಿಬೈಲು, ಚರಣ್ ಗಟ್ಟಿ ಮಾರ್ನಬೈಲು, ವಿಶ್ವನಾಥ ಪೂಜಾರಿ ಮರ್ತಾಜೆ, ಸದಾನಂದ ಸುವರ್ಣ, ಪುರುಷೋತ್ತಮ ಪೂಜಾರಿ ಮಿತ್ತಕಟ್ಟ, ಭಜರಂಗದಳ ಮುಖಂಡ ದೀಪಕ್ ಕೋಟ್ಯಾನ್ ಸಜೀಪ, ರವೀಂದ್ರ ಕಂದೂರು ಇದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…