ಬಿ.ಸಿ.ರೋಡ್ ಸ್ಟೇಟ್ ಬ್ಯಾಂಕ್ ಎದುರು ನಡೆದುಕೊಂಡು ಹೋಗುವವರಷ್ಟೇ ಅಲ್ಲ, ವಾಹನ ಸವಾರರೂ ಸಮಸ್ಯೆ ಅನುಭವಿಸಬೇಕು. ಕೆಲವು ವರ್ಷಗಳಾಯಿತು. ಈ ಸಮಸ್ಯೆಗೆ ಇನ್ನೂ ಮುಕ್ತಿ ದೊರಕಿಲ್ಲ. ಟೂರಿಸ್ಟ್ ಟ್ಯಾಕ್ಸಿ ನಿಲ್ಲಲೂ ಇದೇ ಜಾಗ, ಆಟೋಗಳು ನಿಲ್ಲಲೂ ಇದೇ ಜಾಗ, ವಾಹನ ಸಂಚಾರಕ್ಕೂ ಇದೇ ಜಾಗ, ನಡೆದುಕೊಂಡು ಹೋಗಲೂ ಇದೇ ಜಾಗ. ಈ ಮಳೆಗಾಲವೂ ಸಮಸ್ಯೆ ಅನುಭವಿಸಬೇಕು ಎನ್ನುತ್ತಾರೆ ಸಾರ್ವಜನಿಕರು.
ಬಿ.ಸಿ.ರೋಡಿನ ರಸ್ತೆಯ ತುಂಬೆಲ್ಲ ಎಂದಿನಂತೆ ನೀರು ನಿಂತ ದೃಶ್ಯಗಳು ಕಂಡುಬಂದವು.
ಸರ್ವೀಸ್ ರಸ್ತೆ ಕಾಮಗಾರಿ ನಡೆಯುವ ಸಂದರ್ಭವೇ ಬಂಟ್ವಾಳನ್ಯೂಸ್ ಸಹಿತ ಮಾಧ್ಯಮಗಳು ಇಲ್ಲಿ ಫುಟ್ ಪಾತ್ ಇಲ್ಲದಿರುವುದು, ನೀರು ಹರಿಯಲು ಸರಿಯಾದ ಜಾಗವಿಲ್ಲದಿರುವ ವಿಚಾರಗಳ ಕುರಿತು ಪ್ರಸ್ತಾಪಿಸಿತ್ತು. ಆದರೆ ಇದು ತನಗೆ ಸಂಬಂಧವೇ ಇಲ್ಲ ಎಂಬ ಅಧಿಕಾರಿಗಳು, ಕೋಟಿ ಲೆಕ್ಕದಲ್ಲಿ ಮಾತನಾಡುವ ಜನಪ್ರತಿನಿಧಿಗಳು, ಸುಡುಬಿಸಿಲು, ಜಡಿಮಳೆಯನ್ನು ಲೆಕ್ಕಿಸದೆ ನಿಲ್ಲುವ ಪಾಪದ ಪ್ರಯಾಣಿಕರ ಬವಣೆ ಹೇಗಿರುತ್ತದೆ ಎಂದು FEEL ಮಾಡಿಕೊಳ್ಳಲಿಲ್ಲ. ಒಂದು ಬಾರಿ ಇಲ್ಲಿ ಬಸ್ಸಿಗೆ ಕಾದು ಬಸ್ ಹತ್ತಿ ಹೋದರೆ ಗೊತ್ತಾಗುತ್ತದೆ ಎಂದು ಸ್ಥಳೀಯ ಪ್ರಯಾಣಿಕರೊಬ್ಬರು ಹೇಳುತ್ತಿರುವುದು ಹಾಗೆಯೇ ಅರಣ್ಯರೋದನವಾಯಿತು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…