ಬಂಟ್ವಾಳ

www.ingallery.in ಆಮಂತ್ರಣ ಪತ್ರಿಕೆ ವೆರೈಟಿ ತಿಳಿಸುವ ಜಾಲತಾಣಕ್ಕೆ ಚಾಲನೆ

ಜಾಹೀರಾತು

www.ingallery.in

ಜಂಜಾಟದ ಬದುಕಿನಲ್ಲಿ ನಿರತರಾಗಿರುವ ಈ ಸಮಯದಲ್ಲಿ ತಮ್ಮ ಶುಭ ಸಮಾರಂಭಗಳ ತಯಾರಿಯನ್ನು  ಸರಳವಾಗಿಸುವ ನಿಟ್ಟಿನಲ್ಲಿ ದ.ಕದಲ್ಲಿ ಈಗಾಗಲೇ ಶೀಘ್ರವಾಗಿ ಛಾಪನ್ನು ಮೂಡಿಸಿರುವ ವಿನೂತನ ಆಮಂತ್ರಣ ಪತ್ರಿಕೆಗಳ ಮಳಿಗೆ ಇನ್‌ಗ್ಯಾಲರಿ ತಮ್ಮ ಗ್ರಾಹಕರ ಅನುಕೂಲಕ್ಕಾಗಿ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ www.ingallery.in ಲೋಕಾರ್ಪಣೆಗೊಳಿಸಿತು.

 

ಭಾರತೀಯ ಕಥೋಲಿಕ್ ಯುವ ಸಂಚಾಲನ ಮಂಗಳೂರು ಧರ್ಮಪ್ರಾಂತ್ಯದ ನಿರ್ದೇಶಕರಾದ ವಂ| ರೊನಾಲ್ಡ್ ಡಿಸೋಜ ರವರು ವೆಬ್‌ಸೈಟ್‌ನ್ನು ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಅವರು ಪ್ರಸ್ತುತ ಸಮಾಜದಲ್ಲಿರುವ ಯುವ ಪೀಳಿಗೆಯ ಮಹತ್ವವನ್ನು ತಿಳಿಸಿದರು.

ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಯುವ ಪೀಳಿಗೆಯು ಉದ್ಯಮ ಕ್ಷೇತ್ರದಲ್ಲೂ ಗಮನ ಹರಿಸಿ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿ ಹೊಸ ಅವಿಷ್ಕಾರಗಳೊಂದಿಗೆ ಸಮಾಜದ ಉನ್ನತಿಗಾಗಿ ಶ್ರಮಿಸುವ ಅಗತ್ಯವಿದೆ ಎಂದು ತಿಳಿಸಿದರು ಹಾಗೂ ಸಂಸ್ಥೆಯ ಮಾಲಕರಾದ ಆಲ್ವ್ವಿನ್ ಡಿಸೋಜರವರ ಈ ಹೆಜ್ಜೆಯನ್ನು  ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಐ.ಸಿವೈ.ಎಂ. ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷರಾದ ಜೈಸನ್ ಪಿರೇರಾ, ಉದ್ಯಮಿಗಳಾದ ನೆಲ್ಸನ್ ಫ್ರ್ಯಾಂಕ್, ಸನೋದ್ ಲೋಬೊ ಹಾಗೂ ಮರ್ವಿನ್ ಡಿಸಿಲ್ವ, ಉಪನ್ಯಾಸಕರಾದ ನೆಲ್ಸನ್ ಮೊನಿಸ್ ಉಪಸ್ಥಿತರಿದ್ದರು.

  • ಹಲವಾರು ಸಂತೃಪ್ತ ಗ್ರಾಹಕರನ್ನು ಹೊಂದಿರುವ, ಬಿ.ಸಿರೋಡ್‌ನ ಹೃದಯ ಭಾಗದಲ್ಲಿ ಈಗಾಗಲೇ ಡಿಜಿಟಲ್ ಪ್ರಿಂಟಿಂಗ್ ಕ್ಷೇತ್ರದಲ್ಲಿ ತಮ್ಮ ಸ್ಥಾನವನ್ನು ಭದ್ರಗೊಳಿಸಿರುವ ಇನ್‌ಗ್ಯಾಲರಿ ಸಂಸ್ಥೆಯು ಈ ಕೆಳಗಿನ ಸೇವೆಗಳನ್ನು ನೀಡುತ್ತಿದೆ.
  • ಎಲ್ಲಾ ಶುಭಸಮಾರಂಭಗಳಿಗಾಗಿ ವಿಶಾಲ ಶ್ರೇಣಿಯ ವಿನೂತನ ಆಮಂತ್ರಣ ಪತ್ರಿಕೆಗಳು
  • ಡಿಜಿಟಲ್ ಹಾಗೂ ಸ್ಕ್ರೀನ್ ಪ್ರಿಂಟ್ ರೀತಿ ಪತ್ರಿಕೆಗಳು ಇಲ್ಲಿ ಮಿತದರಗಳಲ್ಲಿ ಸೂಕ್ತ ಸಮಯದಲ್ಲಿ ದೊರೆಯುವುದು.
  • ತಮ್ಮ ಪ್ರೀತಿ ಪಾತ್ರರಿಗಾಗಿ ತಮ್ಮ ಇಷ್ಟದ ಭಾವಚಿತ್ರವನ್ನು ಅಳವಡಿಸಿ ಉಡೊಗೊರೆಯಾಗಿ ನೀಡಬಹುದಾದ ಟೀಶರ್ಟ್, ಜ್ಯಾಕೆಟ್, ಮಗ್, ಟೀ ಕಪ್, ಗೋಡೆ ಗಡಿಯಾರ, ಬಟನ್ ಬ್ಯಾಡ್ಜ್, ಮೌಸ್ ಪ್ಯಾಡ್, ಟೈಲ್ಸ್, ಫೋಟೊ ಫ್ರೇಮ್, ಆಕ್ರೆಲಿಕ್ ಸ್ಮರಣಿಕೆ, ತಲೆದಿಂಬು ಕವರ್, ವಾಟರ್ ಬಾಟಲ್, ಪೆನ್ ಮತ್ತು ಕೀ ಚೈನ್ ಮುಂತಾದ ಉಡೊಗೊರೆಗಳು ಲಭಿಸುತ್ತದೆ.

ವೆಬ್‌ಸೈಟ್ ಅನಾವರಣ ಸಂದರ್ಭದಲ್ಲಿ ತಮ್ಮ ಸಂಸ್ಥೆಯ ಹೊಸ ಉತ್ಪನ್ನ ಪರಿಚಯಿಸಿದ ಆಲ್ವಿನ್ ಡಿಸೋಜರವರು ನಮ್ಮಲ್ಲಿ ಪ್ರಿಂಟೆಡ್ ಮೊಬೈಲ್ ಕವರ್ ಉತ್ತಮ ಗುಣಮಟ್ಟದಲ್ಲಿ ದೊರಕುತ್ತವೆ ಎಂದು ತಿಳಿಸಿದರು.

ಸಂಸ್ಥೆಯ ಡಿಸೈನರ್‌ಗಳಾದ  ಅಭಿಷೇಕ್ ಪಿಲಿಂಗಾಲು ಹಾಗೂ  ಸತೀಶ್ ಮತ್ತು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 91 9880921097, +91 9743521097

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts