ಪ್ರಮುಖ ಸುದ್ದಿಗಳು

2.72 ಲಕ್ಷಗಳ ಲೀಡ್ ನೊಂದಿಗೆ ಹ್ಯಾಟ್ರಿಕ್ ಸಾಧಿಸಿದ ನಳಿನ್

  • ಮತಗಳ ಸಂಖ್ಯೆ ಬಿಜೆಪಿ, ಎಸ್.ಡಿ.ಪಿ.ಐ.ಗೆ ಏರಿಕೆ

ಇದು 2014 ಫಲಿತಾಂಶ

ಜಾಹೀರಾತು
  • ನಳಿನ್‌ ಕುಮಾರ್‌ ಕಟೀಲು-  ಬಿಜೆಪಿ: 6,42,739
  • ಜನಾರ್ದನ ಪೂಜಾರಿ –  ಕಾಂಗ್ರೆಸ್‌: 4,99,030
  • ಹನೀಫ್‌ ಖಾನ್‌ ಕೊಡಾಜೆ – ಎಸ್‌ಡಿಪಿಐ: 27,254
  • ಯಾದವ ಶೆಟ್ಟಿ – ಸಿಪಿಎಂ: 9,394
  • ನೋಟಾ: 7,109
  • ಗೆಲುವಿನ ಅಂತರ: 1,43,709

ಈ ಬಾರಿ 

ನಳಿನ್ ಕುಮಾರ್ ಕಟೀಲ್ (ಬಿಜೆಪಿ)- 774285, ಮಿಥುನ್ ಎಂ.ರೈ (ಕಾಂಗ್ರೆಸ್)- 499664 ಮೊಹಮ್ಮದ್ ಇಲ್ಯಾಸ್ (ಎಸ್ಡಿಪಿಐ) – 46839

ಬಿಜೆಪಿ ಮತವೃದ್ಧಿ:

ಕಳೆದ ಲೋಕಸಭಾ ಚುನಾವಣೆಗಿಂದ ಈ ಬಾರಿ ಸುಮಾರು 90 ಸಾವಿರದಷ್ಟು ಮತಗಳು ಬಿಜೆಪಿಗೆ ಈ ಬಾರಿ ಬಿದ್ದಿವೆ. ಕಾಂಗ್ರೆಸ್ ಮತಗಳು ಇಳಿಮುಖವಾದರೆ ಎಸ್.ಡಿ.ಪಿ.ಐ.ಗೆ ಜಾಸ್ತಿಯಾಗಿರುವುದು ಈ ಚುನಾವಣೆ ವಿಶೇಷ.

ಎಸ್.ಡಿ.ಪಿ.ಐ. ಮತವೃದ್ಧಿ

ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಎಸ್.ಡಿ.ಪಿ.ಐ. ತನ್ನ ಮತಗಳನ್ನು ಹೆಚ್ಚಿಸಿಕೊಂಡಿದೆ. ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸಮಾನವಾಗಿ ಟೀಕಿಸುತ್ತಿದ್ದ ಪಕ್ಷದ ಅಭ್ಯರ್ಥಿ ಮಹಮ್ಮದ್ ಇಲ್ಯಾಸ್ ತುಂಬೆ 46839 ಮತಗಳನ್ನು ಗಳಿಸಿ ಗಮನ ಸೆಳೆದಿದ್ದಾರೆ. ಕಳೆದ ಲೋಕಸಭೆ ಚುನಾವಣೆಗಿಂತ ಈ ಬಾರಿ ಎಸ್.ಡಿ.ಪಿ.ಐಗೆ ದುಪ್ಪಟ್ಟು ಮತಗಳ ವೃದ್ಧಿಯಾಗಿದೆ.

ಕಳೆದ ಬಾರಿ 4,99,030 ಅಂದರೆ 5 ಲಕ್ಷದವರೆಗೆ ಇದ್ದ ಕಾಂಗ್ರೆಸ್ ಮತಗಳು ಈ ಬಾರಿ ಏರಿಕೆ ಕಂಡಿಲ್ಲ ಈ ಬಾರಿ ಅಭ್ಯರ್ಥಿ ಮಿಥುನ್ ರೈ 499664. ಗಳಿಸಿದ್ದು, ಹೊಸ ಮುಖವನ್ನಿಳಿಸಿದರೂ ಮತವೃದ್ಧಿಯಾಗಿಲ್ಲ.

1991ರಿಂದಲೂ ಬಿಜೆಪಿ ಗೆಲುವು:

ಕರ್ನಾಟಕದ ಮಟ್ಟಿಗೆ ಹಿಂದುತ್ವದ ಪ್ರಯೋಗ ಶಾಲೆ ಎಂದು ಹೇಳಲಾಗುವ ದಕ್ಷಿಣ ಕನ್ನಡ ಬಿಜೆಪಿಯ ಗಟ್ಟಿನೆಲವಾಗಿದೆ ಎಂದು 1991ರ ಫಲಿತಾಂಶಗಳು ತೋರಿಸಿಕೊಟ್ಟಿವೆ. ನಳಿನ್‌ ಕುಮಾರ್‌ ಕಟೀಲ್‌ ಸತತ ಮೂರನೇ ಬಾರಿಗೆ ಬಿಜೆಪಿಯಿಂದ ಅದೃಷ್ಟಪರೀಕ್ಷೆಗೆ ಇಳಿದು ಯಶಸ್ಸು ಸಾಧಿಸಿದ್ದಾರೆ. ಧನಂಜಯ ಕುಮಾರ್ ,ಡಿ.ವಿ.ಸದಾನಂದ ಗೌಡ ಅವರು ಹಿಂದಿನ ಬಿಜೆಪಿ ಎಂ.ಪಿ.ಗಳು.

ಶಾಸಕರ ಕೊಡುಗೆ:

2018ರ ವಿಧಾನಸಭೆ ಚುನಾವಣೆಯಲ್ಲಿ ದ.ಕ.ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳ ಪೈಕಿ 7ರಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿರುವುದೂ ಬಿಜೆಪಿ ಪಾಲಿಗೆ ಪ್ಲಸ್‌ ಪಾಯಿಂಟ್‌ ಆಗಿದೆ. ಬಿಜೆಪಿ ಎಲ್ಲ ಕ್ಷೇತ್ರಗಳಲ್ಲೂ ಗಣನೀಯವಾಗಿ ಮತವೃದ್ಧಿ ಮಾಡಿಕೊಂಡಿರುವುದೂ ಗಮನಾರ್ಹ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts