ಪ್ರಮುಖ ಸುದ್ದಿಗಳು

ಚುನಾವಣೆಗೆ ತೆರೆ, ಯಾರಾಗುತ್ತಾರೆ ದೊರೆ?

ಲೋಕಸಭೆ ಚುನಾವಣೆಯ ಎಲ್ಲ ಏಳು ಹಂತಗಳ ಚುನಾವಣೆ ಮುಕ್ತಾಯಗೊಂಡಿದ್ದು, ಫಲಿತಾಂಶದ ಕುರಿತು ಕ್ಷಣಗಣನೆ ಆರಂಭಗೊಂಡಿದೆ. ಮೇ.23ರಂದು ಫಲಿತಾಂಶವಾದರೂ ಈಗಾಗಲೇ ಮಾಧ್ಯಮಗಳು ಮತದಾನೋತ್ತರ ಸ್ಥಿತಿ ಗತಿ ಆಧರಿಸಿ, ತನ್ನ ಸಮೀಕ್ಷಾವರದಿಗಳನ್ನು ಒದಗಿಸಲಾರಂಭಿಸಿವೆ.

ಜಾಹೀರಾತು

ಟೈಮ್ಸ್ ನೌ ಸಮೀಕ್ಷೆಯ ಪ್ರಕಾರ ಎನ್.ಡಿ.ಎ. ಮತ್ತೆ ಅಧಿಕಾರಕ್ಕೆ ಬರಬಹುದು. ಬಿಜೆಪಿ 306 ಲೋಕಸಭಾ ಸ್ಥಾನಗಳನ್ನು ಗೆದ್ದು ಮತ್ತೆ ಭರ್ಜರಿ ಬಹುಮತದಿಂದ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ 132, ಇತರರ 104 ಸ್ಥಾನಗಳನ್ನು ಗೆಲ್ಲಲಿದ್ದಾರೆ.

ನ್ಯೂಸ್ ನೇಶನ್ ಸಮೀಪಕ್ಷೆ ಪ್ರಕಾರ, ಎನ್.ಡಿ.ಎ 290, ಯುಪಿಎ 126 ಇತರೆ 138 ಸೀಟು ಗಳಿಸಬಹುದು.

ರಿಪಬ್ಲಿಕ್ ಭಾರತ್ – ಜನ್ ಕೀ ಬಾತ್ ಸಮೀಕ್ಷೆ ಪ್ರಕಾರ ಎನ್.ಡಿ.ಎ. 305 ಸೀಟು ಗಳಿಸಬಹುದು. ಕಾಂಗ್ರೆಸ್ 124 ಸೀಟು ಗಳಿಸಲಿದೆ ಎಂಬುದು ಅವರ ಲೆಕ್ಕಾಚಾರ.

ಸಂಜೆ 6 ಗಂಟೆಗೆ ಮತದಾನ ಮುಗಿದಿದ್ದು, ಏಳೂ ಹಂತಗಳಲ್ಲಿ ಒಟ್ಟಾರೆ ಸರಾಸರಿ ಶೇ 68ರಷ್ಟು ಮತದಾನ ನಡೆದಿದೆ. ಮತದಾನ ಮುಗಿಯುತ್ತಿದ್ದಂತೆಯೇ ಮಾಧ್ಯಮಗಳು ಮತದಾನೋತ್ತರ ಸಮೀಕ್ಷೆಗಳನ್ನು ಪ್ರಕಟಣೆಗೆ ಸಿದ್ಧತೆ ಆರಂಭಿಸಿದವು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.