ಸಿನಿಮಾ

ರೆಡ್ ಎಫ್ ಎಂ ತುಳು ಚಿತ್ರ ಪ್ರಶಸ್ತಿ ಪ್ರದಾನ

ಪ್ರಸಿದ್ಧ ಬಾನುಲಿ ಚಾನೆಲ್ ರೆಡ್ ಎಫ್.ಎಂ. ಆಯೋಜನೆಯಲ್ಲಿ ತುಳು ಚಲನಚಿತ್ರ ಪ್ರಶಸ್ತಿ ಪ್ರದಾನ (ಸೀಸನ್ 4) ಮಂಗಳೂರಿನ ಕದ್ರಿ ಕ್ರಿಕೆಟ್ ಮೈದಾನದಲ್ಲಿ ಇತ್ತೀಚೆಗೆ ನಡೆಯಿತು.

ಜಾಹೀರಾತು

ಚಿತ್ರನಟ ವಿಜಯ್ ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅಥಿತಿಗಳಾಗಿ ಮಾಜಿ ಸಚಿವ ಜೆ. ಕೃಷ್ಣ ಪಾಲೇಮಾರ್, ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ನ ಎಂ ಡಿ ಶ್ರೀನಾಥ್ ಹೆಬ್ಬಾರ್, ಓರಿಯೆಂಟಲ್ ಇನ್ಶೂರೆನ್ಸ್ ನ ಉಷಾ, ಐಡಿಯಲ್ ಐಸ್ ಕ್ರೀಮ್ ನ ಮುಕುಂದ್ ಕಾಮತ್, ಎಸ್.ಎಲ್.ಶೇಟ್ ಜುವೆಲರಿಯ ಪ್ರಶಾಂತ್ ಶೇಟ್, ಹಿರಿಯ ಸಾಹಿತಿ ಸೀತಾರಾಮ್ ಕುಲಾಲ್, ವಿತರಕರು ನಿರ್ಮಾಪರೂ ಆಗಿರುವ ಟಿ.ಎ. ಶ್ರೀನಿವಾಸ್ ರೆಡ್ ಎಫ್.ಎಂ. ಡಿಜಿಎಂ ಸುರೇಶ ಗಣೇಸನ್ ಹಾಗು ಶೋಭಿತ್ ಶೆಟ್ಟಿ , ಕರ್ನಲ್ ಶರತ್ ಭಂಡಾರಿ ಉಪಸ್ಥಿತರಿದ್ದರು.

2017 ರಲ್ಲಿ ಬಿಡುಗಡೆಯಾದ 10 ಸಿನೆಮಾಗಳಲ್ಲಿ ಆಯ್ದ 22 ವಿಭಾಗಗಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು,  ತುಳು ಚಿತ್ರರಂಗದ ಆರಂಭದ ದಿನಗಳಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದ ಜೆ ಸೀತಾರಾಮ ಶೆಟ್ಟಿ ಯವರಿಗೆ ಜೀವಮಾನ ಸಾಧನೆಗೆ ಪ್ರಶಸ್ತಿ ನೀಡಲಾಯಿತು. ಬಳಿಕ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.