Categories: ಕಲ್ಲಡ್ಕ

ಬೊರಿಮಾರ್ ಚರ್ಚ್ ನಲ್ಲಿ ವಿಶೇಷ ಧ್ಯಾನಕೂಟ

ಜಾಹೀರಾತು

ಶತಮಾನೋತ್ತರ ಬೆಳ್ಳಿ ಹಬ್ಬ ಆಚರಣಾ ಹೊಸ್ತಿಲಲ್ಲಿರುವ ಸಂತ ಜೋಸೆಫರ ದೇವಾಲಯ ಬೊರಿಮಾರ್ ನಲ್ಲಿ ಪ್ರಾಯಶ್ಚಿತ ಕಾಲದ ವಿಶೇಷ ಧ್ಯಾನ ಕೂಟವನ್ನು ಮಾರ್ಚ್ 20 ರಿಂದ 24 ರ ತನಕ ಏರ್ಪಡಿಸಲಾಗಿತ್ತು. ವಿಶೇಷ ಧ್ಯಾನ ಕೂಟದ ಪ್ರಸ್ತುತಿ ಮತ್ತು ಪ್ರಸಂಗದಾರರಾಗಿ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಬಿಷಪರು ಆದ ಅತೀ ವಂದನೀಯ ಡಾ| ಲಾರೆನ್ಸ್ ಮುಕ್ಕುಝಿಯವರು ಆಗಮಿಸಿದ್ದರು. ಕಳೆದ ಐದು ದಿವಸಗಳಲ್ಲಿ ನೂರಾರು ಭಕ್ತಾದಿಗಳು ಪ್ರಾರ್ಥನಾ ಕೂಟದಲ್ಲಿ ಭಾಗವಹಿಸಿದ್ದರು. ಪ್ರಾಯಶ್ಚಿತ ಕಾಲದಲ್ಲಿ ಇಂತಹ ಧ್ಯಾನ ಕೂಟವನ್ನು ಏರ್ಪಡಿಸಿದ ಪಾಲನಾ ಸಮಿತಿಯವರಿಗೆ ಧರ್ಮಾಧ್ಯಕ್ಷರು ಅಬಿನಂದಿಸಿದರು. ಬಿಷಪರನ್ನು ಪಾಲನಾ ಸಮಿತಿಯ ಪರವಾಗಿ ಚರ್ಚ್ ಧರ್ಮ ಗುರು ವಂದನೀಯ ಗ್ರೆಗರಿ ಪಿರೇರಾ ರವರು ಶಾಲು ಮತ್ತು ಹಣ್ಣು ಹಂಪಲುಗಳನ್ನು ನೀಡಿ ಸನ್ಮಾನಿಸಿದರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ರೋಷನ್ ಬೊನಿಫಾಸ್ ಮಾರ್ಟಿಸ್ ರವರು ಗೌರವ ಸನ್ಮಾನ ಪತ್ರ ಓದಿ ಹಸ್ತಾಂತರಿಸಿದರು. ಬೆಂಗಳೂರಿನಿಂದ ಆಗಮಿಸಿ ಬ್ರದರ್ ಆಂಟನಿ ರಾಜ್ ಮತ್ತು ತಂಡದವರು ಗೀತೆಗಳನ್ನು ಹಾಡಿದರು. ನೆರೆದ ಎಲ್ಲಾ ಭಕ್ತಾಧಿಗಳಿಗೆ ಭೊಜನದ ವ್ಯವಸ್ಥೆ ಮಾಡಲಾಗಿತ್ತು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.