ನಳಿನ್ ವಿರುದ್ಧ ಸೆಣಸಲು ಯುವಕ ಮಿಥುನ್ ರೈ ಕಣಕ್ಕಿಳಿಸಿದ ಕಾಂಗ್ರೆಸ್

ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ  ತನ್ನ ಅಭ್ಯರ್ಥಿಗಳ ಎಂಟನೇ ಪಟ್ಟಿಯನ್ನು ಶನಿವಾರ ರಾತ್ರಿ ಪ್ರಕಟಿಸಿದೆ. ಇದರಲ್ಲಿ ಕರ್ನಾಟಕದ ಹದಿನೆಂಟು ಕ್ಷೇತ್ರಗಳ ಅಭ್ಯರ್ಥಿಗಳನ್ನು ಸಹ ಘೋಷಿಸಲಾಗಿದೆ. ಇದು ರಾಜ್ಯದಲ್ಲಿನ ಕ್ಷೇತ್ರಗಳಿಗೆ ಕಾಂಗ್ರೆಸ್ ಪ್ರಕಟಿಸುತ್ತಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯಾಗಿದೆ.

ಜಾಹೀರಾತು

ಅದರಂತೆ ದಕ್ಷಿಣ ಕನ್ನಡ ಕ್ಷೇತ್ರದಿಂದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಚಿಕ್ಕೋಡಿಯಿಂದ ಪ್ರಕಾಶ್ ಹುಕ್ಕೇರಿ, ಬೆಳಗಾವಿವಿರುಪಾಕ್ಷಿ ಎಸ್. ಸಾಧುನವರ್, ಬಾಗಲಕೋಟೆವೀಣಾ ಕಾಶಪ್ಪನವರ್, ಕಲಬುರ್ಗಿ (ಎಸ್ಸಿ) – ಮಲ್ಲಿಕಾರ್ಜುನ ಖರ್ಗೆ. ರಾಯಚೂರು (ಎಸ್ಸಿ) – ಬಿ.ವಿ. ನಾಯಕ್, ಬೀದರ್ಈಶ್ವರ ಖಂಡ್ರೆ, ಕೊಪ್ಪಳರಾಜಶೇಖರ ಹಿಟ್ನಾಳ್, ಬಳ್ಳಾರಿ (ಎಸ್ಟಿ)- ವಿ.ಎಸ್. ಉಗ್ರಪ್ಪ, ಹಾವೇರಿಡಿ.ಆರ್. ಪಾಟೀಲ್, ದಾವಣಗೆರೆಶಾಮನೂರು ಶಿವಶಂಕರಪ್ಪ, ದಕ್ಷಿಣ ಕನ್ನಡಮಿಥುನ್ ರೈ, ಚಿತ್ರದುರ್ಗ (ಎಸ್ಸಿ)- ಬಿ.ಎಸ್. ಚಂದ್ರಪ್ಪ, ಮೈಸೂರುಕೊಡಗುಸಿ.ಎಚ್. ವಿಜಯಶಂಕರ್, ಚಾಮರಾಜನಗರಆರ್. ಧ್ರುವನಾರಾಯಣ, ಬೆಂಗಳೂರು ಗ್ರಾಮಾಂತರಡಿಕೆ ಸುರೇಶ್, ಬೆಂಗಳೂರು ಕೇಂದ್ರರಿಝ್ವಾನ್ ಅರ್ಷದ್, ಚಿಕ್ಕಬಳ್ಳಾಪುರಎಂ. ವೀರಪ್ಪ ಮೊಯಿಲಿ, ಕೋಲಾರ (ಎಸ್ಸಿ)- ಕೆ.ಎಚ್. ಮುನಿಯಪ್ಪ ಅವರುಗಳನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಲಾಗಿದೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.