ಭಿತ್ತಿಪತ್ರ ಮುದ್ರಣ ಮೇಲೆ ನಿಗಾ

ರಾಜಕೀಯ ಸಂಬಂಧಿ ಜಾಹೀರಾತು ಮತ್ತು ಭಿತ್ತಿಪತ್ರಗಳ ಮೇಲೆ ಮುದ್ರಣಕಾರರು ತಮ್ಮ ಹಾಗೂ ಜಾಹೀರಾತು ನೀಡಿದವರ ವಿವರ ಪ್ರಕಟಿಸದಿದ್ದರೆ ಸಮಸ್ಯೆ ಎದುರಿಸಬೇಕಾದೀತು!!

ಜಾಹೀರಾತು

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ಜಾಹೀರಾತು ನೀಡುವುದು, ಭಿತ್ತಿಪತ್ರ ಹಂಚುವುದು ಸೇರಿ ಇನ್ನಿತರ ಕಾರ್ಯಗಳ ಮೇಲೆ ನಿಗಾವಹಿಸಲಾಗುತ್ತದೆ. ರಾಜಕೀಯ ಸಂಬಂಧಿ ಜಾಹೀರಾತು ಮತ್ತು ಭಿತ್ತಿಪತ್ರ ಮುದ್ರಣಕ್ಕೆ ಸೂಚಿಸುವವರ ವಿವರ ನೀಡಬೇಕಾಗುತ್ತದೆ. ಅಲ್ಲದೆ, ಜಾಹೀರಾತು ಮತ್ತು ಭಿತ್ತಿಪತ್ರಗಳ ಮೇಲೆ ಮುದ್ರಣಕಾರರು ಮತ್ತು ಜಾಹೀರಾತು ನೀಡಿದವರ ವಿವರ ಆಯೋಗಕ್ಕೆ ಒದಗಿಸಬೇಕಾಗುತ್ತದೆ.

ಜಾಹೀರಾತು ಪ್ರಕಟಿಸುವುದಕ್ಕೂ ಮುನ್ನ ಸಂಬಂಧಪಟ್ಟ ಚುನಾವಣಾ ತಂಡಗಳಿಂದ ಅನುಮತಿ ಪಡೆಯಬೇಕು ಹಾಗೂ ಅದನ್ನು ಚುನಾವಣಾಧಿಕಾರಿಗಳು ಅನುಮೋದಿಸಬೇಕು. ಒಂದು ವೇಳೆ ಅನುಮತಿ ಪಡೆಯದಿದ್ದರೆ ಅಂತಹ ಮುದ್ರಣಕಾರರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಲಾಗುವುದು ಎಂಬುದು ಆಯೋಗದ ಮಾಹಿತಿ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.