ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನ ಬ್ರಹ್ಮರಥೋತ್ಸವ ಪ್ರಯುಕ್ತ ಬುಧವಾರ ಸಂಜೆ ಸೇರಿದ್ದ ಸಹಸ್ರಾರು ಭಕ್ತರು ರಥಾರೋಹಣದ ದೃಶ್ಯವನ್ನು ಕಣ್ತುಂಬಿಕೊಂಡರು. ಈ ಸಂದರ್ಭ ಮಲ್ಲಿಗೆಪ್ರಿಯ ವೆಂಕಟರಮಣ ದೇವರಿಗೆ ಮಲ್ಲಿಗೆ ಸೇವೆ ಸಮರ್ಪಣೆ ನಡೆಯಿತು. ಬುಧವಾರ ಮಹಾಪ್ರಾರ್ಥನೆ, ಯಜ್ಞಾರಂಭ, ರಥಾರೋಹಣ, ಸಮಾರಾಧನೆ, ರಥೋತ್ಸವ, ದೀಪ ನಮಸ್ಕಾರ, ಬೆಳ್ಳಿ ಪಲ್ಲಕಿ ಉತ್ಸವ, ವಸಂತ ಪೂಜೆ ನಡೆದವು. ಮಾ.14ರಂದು ಅವಭೃತ ಉತ್ಸವ ನಡೆಯಲಿದೆ.