ಬಂಟ್ವಾಳ

ಆಲದಪದವು ಅಕ್ಷರ ಭಾರತಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಕರಾಟೆಯಲ್ಲಿ ಸಾಧನೆ

ಆಲದಪದವು: ಶೀಟೋ – ರಿಯೂ ಕರಾಟೆ – ಡೋ ಹನ್ನೊಂದನೇ ವೆಸ್ಟರ್ನ್ ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಫ್ ಮಂಗಳೂರಿನ ಹಂಪನಕಟ್ಟೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಅಸೋಸಿಯೇಷನ್ ಕಟ್ಟಡದ ನಂದಿನಿ ಸಭಾಭವನದಲ್ಲಿ ನಡೆಯಿತು.ಅಕ್ಷರ ಭಾರತಿ ಆಂಗ್ಲಮಾಧ್ಯಮ ಪ್ರೌಢ ಶಾಲೆ ಆಲದಪದವು ಇಲ್ಲಿನ ಕರಾಟೆ ವಿದ್ಯಾರ್ಥಿಗಳು ಈ ಸ್ಪರ್ಧಾ ಕೂಟದಲ್ಲಿ ಭಾಗವಹಿಸಿದ್ದು, ಸಾಧನೆ ಮೆರೆದಿದ್ದಾರೆ.

ಜಾಹೀರಾತು

 

ಒಂಬತ್ತನೇ ತರತಿಯ ಕು ಶೋನಿಕಾ ವಿ.ಆರ್ ಬಂಗೇರ ಕುಮಿತೆ ವಿಭಾಗದಲ್ಲಿ ಪ್ರಥಮ ಕಟಾದಲ್ಲಿ ತೃತೀಯ, ಮಹಮ್ಮದ್ ಫಾಝಿಲ್ ಅನ್ವ ಝ್ ಎಂಟನೇ ತರಗತಿ ಕಟಾ ದ್ವಿತೀಯ, ಕುಮಿತೆ ದ್ವಿತೀಯ, ಸ್ಕಂದ ಆರನೇ ತರಗತಿ ಕಟಾ ತೃತೀಯ, ಕುಮಿತೆ ದ್ವಿತೀಯ, ಮನ್ವಿತ್ ಆರನೇ ತರಗತಿ ಕಟಾ ಪ್ರಥಮ, ನವನೀತ್. ಆರ್ ನಾಲ್ಕನೇ ತರಗತಿ ಕಟಾ ತೃತೀಯ ಮೋಕ್ಷಿತ್ ಮೂರನೇ ತರಗತಿ ಪ್ರಥಮ, ಕುಮಿತೆ ತೃತೀಯ ಸ್ಥಾನ ಪಡೆದು ಮೂರು ಚಿನ್ನದ ಪದಕ, ಮೂರು ಬೆಳ್ಳಿ ಪದಕ ನಾಲ್ಕು ಕಂಚಿನ ಪದಕದೊಂದಿಗೆ ಪ್ರಮಾಣ ಪತ್ರ ಪಡೆದುಕೊಂಡಿರುತ್ತಾರೆ. ವಿಜೇತ ವಿದ್ಯಾರ್ಥಿಗಳೊಂದಿಗೆ ಶಾಲಾ ಮೂಖ್ಯೋಪಾದ್ಯಾಯರಾದ ಮೋಹನ್.ಹೆಚ್ ಸಂಚಾಲಕರಾದ ಮೋಹನ್ ರೈ.ಕೆ, ಕರಾಟೆ ಶಿಕ್ಷಕ ಸೆನ್ಸಾಯಿ ವಸಂತ. ಕೆ. ಬಂಗೇರ ಉಪಸ್ಥಿತರಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.