www.bantwalnews.com Report – ಸಂಪಾದಕ: ಹರೀಶ ಮಾಂಬಾಡಿ
ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಆಡಳಿತ ಟ್ರಸ್ಟ್(ರಿ) ಮಾರ್ನಬೈಲು ಇದರ ವಾರ್ಷಿಕ ಮಹಾ ಸಭೆ ಸಂಜೀವ ಗುರುಸ್ವಾಮಿ ಗೌರವ ಉಪಸ್ಥಿತಿ ಹಾಗೂ ಯಾದವ ಬಂಗೇರ ಕಂಚಿಲ ಅಧ್ಯಕ್ಷತೆಯಲ್ಲಿ ನಡೆಯಿತು. ಮುಂದಿನ ಸಾಲಿನ ಸಮಿತಿಯನ್ನು ಈ ಸಂದರ್ಭ ರಚಿಸಲಾಯಿತು.
ಗೌರವ ಅಧ್ಯಕ್ಷರಾಗಿ ಸಂಜೀವ ಗುರುಸ್ವಾಮಿ ಅಮ್ಟೂರು ಮತ್ತು ಕೃಷ್ಣ ಗುರುಸ್ವಾಮಿ ಮಾರ್ನಬೈಲು, ಅಧ್ಯಕ್ಷರಾಗಿ ಯಾದವ ಬಂಗೇರ ಕಂಚಿಲ, ಉಪಾಧ್ಯಕ್ಷರು ಯೋಗೀಶ ಪೂಜಾರಿ ಕಂದೂರು, ಕಾರ್ಯದರ್ಶಿ ಅಶೋಕ ಗಟ್ಟಿ ನಂದಾವರ, ಜೊತೆ ಕಾರ್ಯದರ್ಶಿ ಅವಿನಾಶ್ ಗಟ್ಟಿ ಮಾರ್ನಬೈಲು, ಕೋಶಾಧಿಕಾರಿ ರಾಜೀವ ಕೊಟ್ಟಾರಿ ಕಲ್ಲಡ್ಕ, ಲೆಕ್ಕ ಪರಿಶೋಧಕರು ಚರಣ್ ಗಟ್ಟಿ ಪೊಲ್ಲುಕೋಡಿ., ಕಾರ್ಯಕಾರಿನಲ್ಲಿ ಸಮಿತಿ ಸದಸ್ಯರು : ಪ್ರವೀಣ ಗಟ್ಟಿ ಮಾರ್ನಬೈಲು, ನಾರಾಯಣ ಕುಲಾಲ್ , ಗಣೇಶ ದೇವಾಡಿಗ , ಸಂತೋಷ್ ಕೋಟ್ಯಾನ್ ಉಮೇಶ್ ಕುಮಾರ್ ಕೋಮಾಲಿ , ಗೋಪಾಲ ಪೂಜಾರಿ ದಾಸರಗುಡ್ಡೆ, ಸೀತಾರಾಮ ನಾಯಿಲ, ಗಣೇಶ ಗುಡ್ಡೆಂಗಡಿ, ನವೀನ ಖಂಡಿಗ , ವಸಂತ ಪೂಜಾರಿ, ಜಯ ಪಾಡಿ., ಮಾಧವ ದಾಸರಗುಡ್ಡೆ ಆಯ್ಕೆಗೊಂಡರು.
ಅಯ್ಯಪ್ಪ ಮಂದಿರದ ಭಜನಾ ಮಂಡಳಿಯ ಪದಾಧಿಕಾರಿಗಳ ಆಯ್ಕೆಯೂ ನಡೆಯಿತು. ಅಧ್ಯಕ್ಷರಾಗಿ ಕೃಷ್ಣಪ್ಪ ಬಂಗೇರ ಕಂಚಿಲ, ಉಪಾಧ್ಯಕ್ಷರು ಲಕ್ಷ್ಮಣ ಗಟ್ಟಿ ನಂದಾವರ, ಕಾರ್ಯದರ್ಶಿ ಸುರೇಶ್
ಕುಲಾಲ್ ಕಲ್ಲಾಡಿಗೋಳಿ, ಜೊತೆ ಕಾರ್ಯದರ್ಶಿ ಸುಧೀರ್ ದಾಸರಗುಡ್ಡೆ, ಸದಸ್ಯರು ಅಶ್ವಿನ್ ಕುಮಾರ್, ಸಂತೋಷ್ ಆಚಾರ್ಯ, ಪ್ರಸನ್ನ ಆಚಾರ್ಯ, ಪ್ರಶಾಂತ ಆಚಾರ್ಯ , ಸದಾಶಿವ ಕ್ವಾಟ್ರಸ್, ಸಂದೇಶ್ ಗಟ್ಟಿ ಮಾರ್ನಬೈಲು ಆಯ್ಕೆಗೊಂಡರು.
ಮಾರ್ನಬೈಲು ಅಯ್ಯಪ್ಪ ಮಂದಿರದ ವತಿಯಿಂದ ಮಾಧವ ದಾಸರಗುಡ್ಡೆ ಅವರ ಪತ್ನಿ ಅನಾರೋಗ್ಯದ ಸಲುವಾಗಿ 15 ಸಾವಿರ ರೂ ಚೆಕ್ ಅನ್ನು ಅಧ್ಯಕ್ಷ ಯಾದವ ಬಂಗೇರ ಕಂಚಿಲ ಮೂಲಕ ಹಸ್ತಾಂತರಿಸಲಾಯಿತು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…