ಜಿಲ್ಲಾ ಸುದ್ದಿ

ಮರಳುಶಿಲ್ಪದಲ್ಲಿ ಬ್ರಾಂಡ್ ಮಂಗಳೂರು

ಬ್ರಾಂಡ್ ಮಂಗಳೂರು ಎಂಬ ಪರಿಕಲ್ಪನೆಯಡಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನಾನಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಹಾಗು ಸಂಘದ ಸದಸ್ಯರು ಮಂಗಳೂರಿನ ಇಮೇಜ್ ಗೆ ಧಕ್ಕೆಯಾಗದಂತೆ ವರ್ತಿಸಲು ಸಾರ್ವಜನಿಕ, ರಾಜಕೀಯ ಸಂಘ, ಸಂಸ್ಥೆಗಳಿಗೆ ವಿನಂತಿಸುತ್ತಿರುವುದು ನಡೆದೇ ಇದೆ. ಸುದ್ದಿಮಾಡುವುದರಲ್ಲೂ ಸ್ವಯಂಶಿಸ್ತು ರೂಪಿಸಿರುವ ಪತ್ರಕರ್ತರ ಕ್ರಮ ಸಾರ್ವತ್ರಿಕವಾಗಿ ಶ್ಲಾಘನೆಗೆ ಒಳಗಾಗಿರುವಂತೆಯೇ ಕರಾವಳಿ ಉತ್ಸವದಲ್ಲೂ ಇದಕ್ಕೆ ಪ್ರೋತ್ಸಾಹಕವಾಗಿ ಮರಳು ಶಿಲ್ಪ ರಚನೆಗೊಂಡಿದೆ.

ಜಾಹೀರಾತು

ಪಣಂಬೂರು ಕಡಲ ಕಿನಾರೆಯಲ್ಲಿ ನಡೆಯುತ್ತಿರುವ ಬೀಚ್ ಉತ್ಸವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬ್ರ್ಯಾಂಡ್ ಮಂಗಳೂರು ಪರಿಕಲ್ಪನೆಯ ಕೋಮು ಸೌಹಾರ್ದತೆ ಸಾರುವ ಮರಳು ಶಿಲ್ಪ ಕಲಾಕೃತಿ ಗಮನ ಸೆಳೆಯಿತು. ಸಂದೇಶ ಮಡಪಾಡಿ, ರವಿ ಹಿರೇಬೆಟ್ಟು ಹಾಗೂ ಪುರಂದರ ತೊಟ್ಟಮ್ ಮರಳಿನ ಕಲಾಕೃತಿ ರಚಿಸಿದ್ದಾರೆ. ಆರು ಗಂಟೆಗಳ ಕಾಲ ಶ್ರದ್ಧೆಯಿಂದ ರೂಪಿಸಿದ ಈ ಮರಳುಶಿಲ್ಪವೀಗ ಆಕರ್ಷಣೆಯ ಕೇಂದ್ರ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.