ಪ್ರಮುಖ ಸುದ್ದಿಗಳು

ನಂತೂರಿನಲ್ಲಿ ಉರುಳಿದ ಅನಿಲ ಟ್ಯಾಂಕರ್

ಮಂಗಳೂರಿನ ನಂತೂರು ಸರ್ಕಲ್ ಸಮೀಪ ಬುಧವಾರ ಬೆಳಗ್ಗಿನ ವೇಳೆ ಅನಿಲ ತುಂಬಿದ ಟ್ಯಾಂಕರ್ ಒಂದು ಉರುಳಿಬಿದ್ದ ಪರಿಣಾಮ ಕುಲಶೇಖರದಿಂದ ಮಂಗಳೂರಿಗೆ ತೆರಳುವ ರಸ್ತೆಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಮಂಗಳೂರು ಪೊಲೀಸರು, ಅಗ್ನಿಶಾಮಕದಳ ಸಹಾಯದಿಂದ ಟ್ಯಾಂಕರನ್ನು ಮೇಲಕ್ಕೆತ್ತಿದ ಬಳಿಕ ವಾಹನ ಸಂಚಾರ ಮೊದಲಿನಂತಾಯಿತು. ಯಾವುದೇ ಗ್ಯಾಸ್ ಸೋರಿಕೆ ಆಗದ ಕಾರಣ ದೊಡ್ಡ ಮಟ್ಟದ ಅಪಾಯ ತಪ್ಪಿದೆ.

ಜಾಹೀರಾತು

ಟ್ಯಾಂಕರ್ ಅನ್ನು ಮೇಲಕ್ಕೆತ್ತಲು ಪ್ರಯತ್ನ ನಡೆದಿದ್ದು, ಗ್ಯಾಸ್ ಲೀಕೇಜ್ ಆಗದಂತೆ ಮೇಲಕ್ಕೆತ್ತಿದ ಬಳಿಕ ಸಂಚಾರ ಸುಗಮವಾಯಿತು. ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದೆ.

ಏನಾಗಿತ್ತು:

ನಂತೂರಿನಿಂದ ಕುಲಶೇಖರ ತೆರಳುವ ದಾರಿಯ ಎರಡೂ ಬದಿಗಳಲ್ಲಿ ವಾಹನ ಸಂಚಾರ ಬಂದ್ ಮಾಡಲಾಯಿತು. ಸ್ಥಳದಲ್ಲಿ ಅಗ್ನಿಶಾಮಕ ದಳ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಪಡೀಲ್ ನಿಂದ ನಂತೂರು ಕಡೆ ಬಂದು ಮಂಗಳೂರಿಗೆ ತೆರಳುವವರು ಪಂಪ್ ವೆಲ್ ಮಾರ್ಗವನ್ನು ಕುಲಶೇಖರದಿಂದ ಮಂಗಳೂರಿಗೆ ತೆರಳುವವರೂ ಪಂಪ್ ವೆಲ್ ಮೂಲಕವೇ ಹೋಗಲು ಸೂಚಿಸಿದರು. ಟ್ಯಾಂಕರ್ ಮೇಲಕ್ಕೆತ್ತಿದ ಬಳಿಕ ರಸ್ತೆ ಸಂಚಾರ ಸುಗಮವಾಗಿ ಸಾಗಿತು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.