ಇರಾ ತಾಳಿತ್ತಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ನಡೆದ ಮಕ್ಕಳ ದಿನಾಚರಣೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಗೆದ್ದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಉಪಾಧ್ಯಕ್ಷ ಚಂದ್ರಾವತಿ, ಗ್ರಾಪಂ ಸದಸ್ಯರಾದ ದೇವದಾಸ ಅಡಪ, ರಮೇಶ್ ಪೂಜಾರಿ , ಪಿಡಿಒ ನಳಿನಿ, ಗಣ್ಯರಾದ ವಾಮನ ಪೂಜಾರಿ, ಅದ್ರಾಮ್ ಸಂಪಿಲ, ಕಿಶೋರ್, ರಾಮ್ ಇರಾ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಪ್ರೇಮಾ ಸ್ವಾಗತಿಸಿದರು. ಈ ಸಂದರ್ಭ ಸೌಮ್ಯಾ ಜೆ. ಶೆಟ್ಟಿ ಅವರು ಅಂಗನವಾಡಿ ಕೇಂದ್ರಕ್ಕೆ ರೇಡಿಯೋ ಸೆಟ್ ಹಸ್ತಾಂತರಿಸಿದರು.