ಬಂಟ್ವಾಳ

ಬಂಟ್ವಾಳದ ಪರಿವರ್ತನೆಗೆ ಬಿಜೆಪಿ ಗೆಲುವು ಮುನ್ನುಡಿ: ನಳಿನ್ ಕುಮಾರ್ ಕಟೀಲ್

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರವನ್ನು ಬಿಜೆಪಿ ಜಯಗಳಿಸಿದ್ದು, ಇದಕ್ಕೆ ಆಯ್ಕೆಯಾದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮತ್ತು ಕಾರ್ಯಕರ್ತರ ಶ್ರಮ ಕಾರಣ. ಬಂಟ್ವಾಳದ ಪರಿವರ್ತನೆಗೆ ಬಿಜೆಪಿ ಗೆಲುವು ಮುನ್ನುಡಿ ಬರೆಯಲಿದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಬಿಜೆಪಿ ಸಜೀಪಮುನ್ನೂರು ಮತ್ತು ಸಜೀಪಮೂಡ ಗ್ರಾಮ ಸಮಿತಿ ವತಿಯಿಂದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಕಂದೂರು ಶ್ರೀ ಗುರು ಮಾಚಿದೇವ ಸಮುದಾಯ ಭವನದಲ್ಲಿ ರವಿವಾರ ನಡೆಯಿತು. ಈ ಸಂದರ್ಭ ಮಾತನಾಡಿದ ಸಂಸದ, ಈ ಭಾಗದ ಜನರ ಋಣ ತೀರಿಸಲು ಶಾಸಕ ರಾಜೇಶ್ ನಾಯ್ಕ್ ಪ್ರಮಾಣಿಕ ಪ್ರಯತ್ನ ಮಾಡುತ್ತಾರೆ , ಇವರಿಗೆ ಸಂಪೂರ್ಣ ಬೆಂಬಲ ನಾನು ಸಂಸದನಾಗಿ ನೀಡುತ್ತೇನೆ ಎಂದರು.‌ ಹಿಂದೂ ಸಮಾಜದ ಮೇಲೆ ರಾಜಕಾರಣದ ಮೂಲಕ ದಾಳಿ ನಡೆಯುತ್ತಿದೆ ಇದಕ್ಕೆ ತಕ್ಕ ಉತ್ತರ ಬಿಜೆಪಿ ಕಾರ್ಯಕರ್ತ ರು ನೀಡುಲು ಸಿದ್ದ ಎಂದರು. ಪರಿವರ್ತನೆಯ ಗಾಳಿ ಬೀಸುತ್ತಿದ್ದು ಕೇರಳದಲ್ಲಿಯೂ ಪರಿವರ್ತನೆ ಅಗುತ್ತಿದೆ , ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರಕಾರ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಾಹೀರಾತು

ಶಾಸಕ ರಾಜೇಶ್ ನಾಯ್ಕ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಪರಿಚಯವಿಲ್ಲದ ತನ್ನನ್ನು ಬಂಟ್ವಾಳ ಕ್ಷೇತ್ರದಲ್ಲಿ ಗೆಲ್ಲುವಂತೆ ಶ್ರಮಿಸಿದ ಪಕ್ಷದ ಮುಖಂಡರಿಗೆ ಹಾಗೂ ಕಾರ್ಯ ಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಬಿಜೆಪಿ ಬಂಟ್ವಾಳ ಕ್ಷೆತ್ರಾಧ್ಯಕ್ಷ ದೇವದಾಸ್ ಶೆಟ್ಟಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.

ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ,  ದ.ಕ.ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೂಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಮಂಗಳೂರು ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಬೊಳಿಯಾರ್, ಉದ್ಯಮಿಗಳಾದ  ವಿವೇಕ್ ಶೆಟ್ಟಿ ನಗ್ರಿಗುತ್ತು, ಸಂತೋಷ್ ಕುಮಾರ್ ಶೆಟ್ಟಿ ದಲಂದಿಲ, ಕ್ಷೇತ್ರ ಉಪಾಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಜಿಪಂ ಸದಸ್ಯ ರವೀಂದ್ರ ಕಂಬಳಿ, ಮಾಜಿ ತಾಪಂ ಅಧ್ಯಕ್ಷ ಯಶವಂತ್ ದೇರಾಜೆ, ಪುರಸಭಾ ಸದಸ್ಯ ಗೋವಿಂದ ಪ್ರಭು, ಬಿಜೆಪಿ ಜಿಲ್ಲಾ ಎಸ್ಟಿ ಮೋರ್ಚಾದ ಅಧ್ಯಕ್ಷ ದಿನೇಶ್ ಅಮ್ಟೂರು, ಮುಖಂಡರಾದ ಜಿ.ಆನಂದ, ತನಿಯಪ್ಪ ಗೌಡ, ಬಾಲಕೃಷ್ಣ ಸೆಕರ್ಳ, ಜಯಶಂಕರ ಬಾಸಿಂತಾಯ, ಸಮಿತಿಯ ವಿವಿಧ ಘಟಕಗಳ ಅಧ್ಯಕ್ಷರುಗಳಾದ ದಯಾನಂದ, ಸುರೇಶ್ ಪೂಂಜಾ, ಅರವಿಙದ ಭಟ್, ರಂಜಿತ್, ವಸಂತ ಶೆಟ್ಟಿ, ಜಯಶಂಕರ, ಈಶ್ವರ ಪೂಜಾರಿ, ಜಯಪ್ರಾಕಾಶ್, ಗಂಗಯ್ಯ ಪೂಜಾರಿ, ಇಸ್ಮಾಯಿಲ್ ನಂದಾವರ, ಶ್ರೀನಿವಾಸ್, ವಿಶ್ವನಾಥ ಕೊಟ್ಟಾರಿ ಉಪಸ್ಥಿತರಿದ್ದರು. ಇದೇ ವೇಳೆ ಕ್ಷೇತ್ರಾಧ್ಯಕ್ಷ ದೇವದಾಸ್ ಶೆಟ್ಟಿ, ಸಂತೋಷ್ ಶೆಟ್ಟಿ ದಲಂದಿಲ , ಶ್ರೀಕಾಂತ್ ಶೆಟ್ಟಿ, ಅವರನ್ನು ಅಭಿನಂದಿಸಲಾಯಿತು. ರಂಜನ್ ತಂಡ ಪ್ರಾರ್ಥಿಸಿ, ಬಜೆಪಿ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ,ಗಟ್ಟಿ ಸ್ವಾಗತಿಸಿ, ವಿರೇಂದ್ರ ವಂದಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.