ವಿಟ್ಲ

ಹಗಲಿನ ವೇಳೆಯೇ ವಿಟ್ಲ ಬೊಬ್ಬೆಕೇರಿ ಸಮೀಪ ಮನೆಯಿಂದ ಲಕ್ಷಾಂತರ ರೂ ನಗ,ನಗದು ಕಳವು

ವಿಟ್ಲದ ಬೊಬ್ಬೆಕೇರಿ ದೇವಸ್ಯಬೈಲು ಎಂಬಲ್ಲಿ ಮಂಗಳವಾರ ಹಗಲಿನ ವೇಳೆ ಲಕ್ಷಾಂತರ ರೂ ಮೌಲ್ಯದ ನಗ, ನಗದು ಕಳವು ಮಾಡಲಾಗಿದೆ.

ಜಾಹೀರಾತು

ವಿಟ್ಲದ ಪತ್ರಕರ್ತ, ಬೊಬ್ಬೆಕೇರಿ ನಿವಾಸಿ ರಮೇಶ್ ಕೆ. ಪುಣಚ (ವಿಷ್ಣುಗುಪ್ತ ಪುಣಚ) ಬೆಳಗ್ಗೆ ಮನೆಯಿಂದ ಹೊರಗೆ ತೆರಳಿದ್ದರು. ಅವರ ಪತ್ನಿಯೂ ಕೆಲಸಕ್ಕೆಂದು ತೆರಳಿದ್ದು, ಸಂಜೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಮನೆಯ ಹಿಂಬಾಗಿಲು ಮುರಿದು, ಒಳನುಗ್ಗಿದ ಕಳ್ಳರು ಎರಡು ಕಪಾಟನ್ನು ಜಾಲಾಡಿದ್ದಾರೆ. ಕಪಾಟಿನಲ್ಲಿ ಇರಿಸಿದ್ದ 65 ಸಾವಿರ ರೂ. ನಗದು ಹಾಗೂ 18 ಪವನ್ ಚಿನ್ನಾಭರಣವನ್ನು ದೋಚಲಾಗಿದೆ. ತಕ್ಷಣವೇ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸಮಾರಂಭವೊಂದಕ್ಕೆಂದು ಅವರು ಲಾಕರ್ ನಿಂದ ಆಭರಣವನ್ನು ತಂದು ಮನೆಯಲ್ಲಿರಿಸಿದ್ದರು.  ಸ್ಥಳಕ್ಕೆ ಎಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ, ಬಂಟ್ವಾಳ ಪೊಲೀಸ್ ಇನ್ಸ್ಪೆಕ್ಟರ್ ನಾಗರಾಜ್, ವಿಟ್ಲ ಪ್ರಭಾರ ಎಸೈ ಹರೀಶ್ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು, ಮಂಗಳೂರಿನಿಂದ ಶ್ವಾನದಳ ಹಾಗೂ ಬೆರಳಚ್ಚು ತಂಜ್ಞರು ಬೇಟಿ ನೀಡಿ ಪರಿಶೀಲಿಸಿದ್ದಾರೆ. ಬಗ್ಗೆ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಬಗ್ಗೆ ಮಾಹಿತಿ ಪಡೆದ ತಂಡದಿಂದಲೇ ಕೃತ್ಯ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.