ಬಂಟ್ವಾಳ

ಅನ್ನಭಾಗ್ಯದ ಅಕ್ಕಿ ಅಕ್ರಮ ಸಾಗಾಟ – ಆರೋಪಿಯ ಬಂಧನ

ಅನ್ನಭಾಗ್ಯದ  ಅಕ್ಕಿಯನ್ನು ಮಾರಾಟ ಮಾಡಲು  ವಾಹನವೊಂದರಲ್ಲಿ ಅಕ್ರಮವಾಗಿ  ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿರುವ ಬಂಟ್ವಾಳ ಗ್ರಾಮಾಂತರ ಪೊಲೀಸರು ಈ ಸಂಬಂಧ ಬಿ.ಸಿ.ರೋಡಿನ ಪರ್ಲಿಯ ನಿವಾಸಿ ನಿಯಾಜ್ ಹಸನ್ ಎಂಬಾತನನ್ನು ಬಂಧಿಸಿದ್ದಾರೆ.

ಜಾಹೀರಾತು

ಈತನಿಂದ  ಅಕ್ಕಿ ಸಹಿತ ಒಟ್ಟು 1.82 ಲಕ್ಷ ರೂ ಮೌಲ್ಯ ದ ಸೊತ್ತುಗಳನ್ನು ವಶಪಡಿಕೊಳ್ಳಲಾಗಿದೆ. ತುಂಬೆ ಸಮೀಪದ ರಾಮಾಲಕಟ್ಟೆ ಎಂಬಲ್ಲಿ ಮಂಗಳವಾರ ರಾತ್ರಿ  ಗಸ್ತಿನಲ್ಲಿದ್ದು, ವಾಹನ ತಪಾಸಣೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ ಐ ಪ್ರಸನ್ನ ಮತ್ತವರ ಸಿಬ್ಬಂದಿಗಳು ನಿರತರಾಗಿದ್ದ ಸಂದರ್ಭ, ತುಂಬೆಯಿಂದ ಬರುತ್ತಿದ್ದ  ಪಿಕಪ್ ವಾಹನವನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದರು. ಈ ಸಂದರ್ಭ 50  ಕೆಜಿಯ 40  ಚೀಲದಲ್ಲಿ  20 ಕಿಂಟ್ವಾಲ್ ರೇಶನ್ ಅಕ್ಕಿ ತುಂಬಿಸಿದ್ದು ಪತ್ತೆಯಾಗಿದೆ. ತಕ್ಷಣ ಚಾಲಕನನ್ನು ವಿಚಾರಿಸಿದಾಗ ಅನ್ನಭಾಗ್ಯದ ಈ ಅಕ್ಕಿಯನ್ನು

ಬಿ. ಸಿ. ರೋಡು ಕಡೆಗೆ ಸಾಗಿಸುತ್ತಿರುವುದು ಬೆಳಕಿಗೆ ಬಂತು. ಪಿಕಪ್ ವಾಹನದಲ್ಲಿ ಗೋಣಿ ಚೀಲವನ್ನು ಹೊಲಿಯುವ 2 ಸಾವಿರ ರೂ ಮೌಲ್ಯ ದ ಮೆಶಿನ್ ಹಾಗೂ 50 ಖಾಲಿ ಗೋಣಿ ಚೀಲಗಳು ಪತ್ತೆಯಾದವು. ತಕ್ಷಣ ಪಿಕಪ್ ಮತ್ತು ಇತರ ಸೊತ್ತುಗಳನ್ನು  ವಶಪಡಿಸಿ,ಆರೋಪಿಯನ್ನು ಬಂಧಿಸಿದ್ದಾರೆ. ಮುಂದಿನ ತನಿಖೆಗಾಗಿ ಪ್ರಕರಣವನ್ನು ಅಹಾರ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ. ಕಾರ್ಯಾಚರಣೆ ಯಲ್ಲಿ ಬಂಟ್ವಾಳ ಗ್ರಾಮಾಂತರ ಪೋಲೀಸ್ ಸಿಬ್ಬಂದಿ ಗಳಾದ ಸುರೇಶ್, ಜಯರಾಮ್, ಜನಾರ್ದನ, ಶಿವಕುಮಾರ್ ನಾಯಕ್, ಕಿರಣ್  ಪಾಲ್ಗೊಂಡಿದ್ದರು

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.