ಬಂಟ್ವಾಳ

ಗಣೇಶನಿಗೆ ಬೃಹದಾಕಾರದ ಎಳ್ಳುಂಡೆ ಹಾರ

ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ ಸಿ ರೋಡು ಇದರ ಆಶ್ರಯದಲ್ಲಿ  ನಡೆದ 39 ನೇ ವರ್ಷದ ಸಾರ್ವಜನಿಕ  ಶ್ರೀ ಗಣೇಶನಿಗೆ ಶ್ರೀರಾಮ ಗೆಳೆಯರ ಬಳಗ ಕೈಕಂಬ ಬಿ ಸಿ ರೋಡು ವತಿಯಿಂದ ಬೃಹದಾಕಾರದ ಎಳ್ಳುಂಡೆ ಹಾರ ಅರ್ಪಿಸಲಾಯಿತು.

ಜಾಹೀರಾತು

ಕೈಕಂಬ ಪೊಳಲಿ ದ್ವಾರದಿಂದ ಬಿ ಸಿ ರೋಡು ತನಕ ಮೆರವಣಿಗೆಯಲ್ಲಿ ಸಾಗಿದ ಸಂದರ್ಭ ಭಕ್ತರು ಬೃಹತ್ ಗಾತ್ರದ ಎಲ್ಲುಂಡೆ ಹಾರವನ್ನು ಗಣೇಶನಿಗೆ ಅರ್ಪಿಸಿದರು.

ಈ ಸಂದರ್ಭದಲ್ಲಿ ಶ್ರೀ ರಾಮ ಗೆಳೆಯರ ಬಳಗದ ಅಧ್ಯಕ್ಷರಾದ ಸದಾಶಿವ ಕೈಕಂಬ, ಉಪಾಧ್ಯಕ್ಷ ಶೈಲೇಶ್ ಕೈಕಂಬ, ಗೌರವ ಸಲಹೆಗಾರ ರಮೇಶ್. ಮೆಲ್ವಿಚಾರಕ ಮಚ್ಚೆಂದ್ರ ಗುರುಕೃಪ ಹಾಗೂ ಸಂಘದ ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಒಟ್ಟು 3500 ಎಳ್ಳುಂಡೆ

ಶ್ರೀರಾಮ ಗೆಳೆಯರ ಬಳಗ ಕೈಕಂಬ ವತಿಯಿಂದ ಬಿ.ಸಿ.ರೋಡ್ ಗಣೇಶನಿಗೆ ಅರ್ಪಿಸಿದ ಎಳ್ಳುಂಡೆಗಳ ಸಂಖ್ಯೆ 3500. ಇದು ನಾಲ್ಕನೇ ವರ್ಷದ ಸೇವೆ ಎನ್ನುತ್ತಾರೆ ಅದರ ಅಧ್ಯಕ್ಷ ಸದಾಶಿವ ಕೈಕಂಬ. 10 ಅಡಿ ಉದ್ದದ ಎಳ್ಳುಂಡೆ ಮಾಲೆಯನ್ನು ತಯಾರಿಸಲು 15 ಸಾವಿರ ರೂ ಖರ್ಚಾಗಿತ್ತು. ಮೆರವಣಿಗೆ ಬಳಿಕ ಸೇರಿದ್ದವರಿಗೆಲ್ಲ ಪ್ರಸಾದ ರೂಪದಲ್ಲಿ ಎಳ್ಳುಂಡೆಗಳನ್ನು ವಿತರಿಸಲಾಯಿತು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.