ಬಂಟ್ವಾಳ

ಜಿಲ್ಲೆ, ರಾಜ್ಯದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

ರಾಜ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

2018-19ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಮಂಗಳೂರು ಉತ್ತರ ವ್ಯಾಪ್ತಿಯ ಸುರತ್ಕಲ್ ಮದ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಶಂಕರ್ ಹಾಗೂ ಪ್ರೌಢಶಾಲೆ ವಿಭಾಗದಲ್ಲಿ ಬೆಳ್ತಂಗಡಿಯ ನಡ ಸರಕಾರಿ ಪ್ರೌಢಶಾಲೆಯ ಯಾಕುಬ್ ಆಯ್ಕೆಯಾಗಿದ್ದಾರೆ.

ಜಾಹೀರಾತು

ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರು ಇವರು:

ಪ್ರಾಥಮಿಕ ಶಾಲೆ (ಕಿರಿಯ ವಿಭಾಗ): ವಿಲ್ಮಾ ಸಿಕ್ವೇರಾ(ಸಹ ಶಿಕ್ಷಕಿ, ದ.ಕ. ಜಿಪಂ. ಕಿರಿಯ ಪ್ರಾಥಮಿಕ ಶಾಲೆ ಓಜಾಲ, ಬಂಟ್ವಾಳ), ಸೀತಾರಾಮ(ಸಹ ಶಿಕ್ಷಕರು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನೆತ್ತರ, ಬೆಳ್ತಂಗಡಿ), ಸೇಸಮ್ಮ( ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಲ್ಲಾಪುಪಟ್ಣ, ಮಂಗಳೂರು ದಕ್ಷಿಣ), ಅಶ್ವಿನಿ ಶೆಡ್ತಿ(ಸಹ ಶಿಕ್ಷಕಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಕ್ವ, ಮಂಗಳೂರು ಉತ್ತರ), ಜ್ಯೋತಿ ಕೆ.(ಸಹ ಶಿಕ್ಷಕಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೇಮಾರು, ಮೂಡುಬಿದರೆ )ತಿಮ್ಮಪ್ಪ(ಸಹ ಶಿಕ್ಷಕರು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾಲೆತ್ತೋಡಿ, ಪುತ್ತೂರು), ಶಾಲಿನಿ ಎಂ.(ಸಹ ಶಿಕ್ಷಕಿ, ಸರಕಾರಿ ಕಿರಿಯ ಹಿರಿಯ ಪ್ರಾಥಮಿಕ ಶಾಲೆ ಎಣ್ಣೆಮಜಲು, ಸುಳ್ಯ)

ಪ್ರಾಥಮಿಕ ಶಾಲೆ (ಹಿರಿಯ ವಿಭಾಗ): ನಳಿನಾಕ್ಷಿ, (ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೋಳಾರ ವೆಸ್ಟ್, ಮಂಗಳೂರು ದಕ್ಷಿಣ), ಮೇರಿ ಡಿಸೋಜ(ಮುಖ್ಯ ಶಿಕ್ಷಕಿ, ಸಂತ ಲಾರೆನ್ಸ್ ಹಿರಿಯ ಪ್ರಾಥಮಿಕ ಶಾಲೆ ಬೋಂದೆಲ್, ಮಂಗಳೂರು ಉತ್ತರ), ವಿನಯ ಕುಮಾರ್ ಎಂ.(ಪ್ರಧಾನ ಮುಖ್ಯ ಶಿಕ್ಷಕ, ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕಲ್ಲಬೆಟ್ಟು, ಮೂಡುಬಿದರೆ), ಮುದರ ಬೈರ(ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿ, ಪುತ್ತೂರು), ಸರಸ್ವತಿ ಕೆ.(ದೈಹಿಕ ಶಿಕ್ಷಣ ಶಿಕ್ಷಕಿ, ಸರಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅರಂತೋಡು, ಸುಳ್ಯ), ಸಂಜೀವ ಎನ್.(ಸಹ ಶಿಕ್ಷಕ, ಟಿಜಿಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿತ್ತೂರು, ಬಂಟ್ವಾಳ)

ಪ್ರೌಢಶಾಲೆ ವಿಭಾಗ: ರೋಶನ್ ಅಲೆಗ್ಸಾಂಡರ್ ಪಿಂಟೋ(ಸಹ ಶಿಕ್ಷಕ, ಕಾರ್ಮೆಲ್ ಪ್ರೌಢಶಾಲೆ ಮೊಡಂಕಾಪು, ಬಂಟ್ವಾಳ), ಗೋಪಾಲಕೃಷ್ಣ ತುಳುಪುಳೆ(ಸಹ ಶಿಕ್ಷಕ, ಅನುದಾನಿತ  ಪ್ರೌಢಶಾಲೆ ನಾರಾವಿ, ಬೆಳ್ತಂಗಡಿ), ಲಿಲ್ಲಿ ಪಾಸ್(ಸರಕಾರಿ ಪ್ರೌಢಶಾಲೆ ಅತ್ತಾವರ, ಮಂಗಳೂರು ದಕ್ಷಿಣ), ಕೃಷ್ಣ ನಾಯಕ್(ದೈಹಿಕ ಶಿಕ್ಷಣ ಶಿಕ್ಷಕ, ವಿದ್ಯಾದಾಯಿನಿ ಪ್ರೌಢಶಾಲೆ ಸುರತ್ಕಲ್, ಮಂಗಳೂರು ಉತ್ತರ), ಬಾಲಕೃಷ್ಣ ಗೌಡ ಬಿ.(ಸರಕಾರಿ ಪ್ರೌಢಶಾಲೆ ಪ್ರಾಂತ್ಯ, ಮೂಡುಬಿದರೆ), ವನಿತಾ ಕುಮಾರಿ (ವೃತ್ತಿ ಕಲಾ ಶಿಕ್ಷಕಿ, ಶ್ರೀರಾಮಕೃಷ್ಣ ಪ್ರೌಢಶಾಲೆ, ಪುತ್ತೂರು), ಚೆನ್ನಪ್ಪ ಗೌಡ ಎಂ.(ಸಹ ಶಿಕ್ಷಕ, ಸರಕಾರಿ ಪದವಿಪೂರ್ವ ಕಾಲೇಜು(ಪ್ರೌಢ ಶಾಲೆ ವಿಭಾಗ) ಗಾಂಧಿನಗರ, ಸುಳ್ಯ

ರೋಶನ್ ಅಲೆಗ್ಸಾಂಡರ್ ಪಿಂಟೋ(ಸಹ ಶಿಕ್ಷಕ, ಕಾರ್ಮೆಲ್ ಪ್ರೌಢಶಾಲೆ ಮೊಡಂಕಾಪು, ಬಂಟ್ವಾಳ),

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.