ನಿಮ್ಮ ಧ್ವನಿ

ಓಟು ಹಾಕುವ ಮುನ್ನ ನೀವು ಏನು ಮಾಡಬೇಕು?

ಮತ್ತೆ ಸ್ಥಳೀಯ ಸಂಸ್ಥೆಗಳಿಗೆ ದಿನಾಂಕ 31.08.18ರಂದು ಚುನಾವಣೆ ನಡೆಯುತ್ತಿದೆ, ಪಕ್ಷದ ನೆಲೆಯಿಂದ ಅಭ್ಯರ್ಥಿಗಳು ನಿಮ್ಮ ಮನೆ ಬಾಗಿಲಿಗೆ ಮತ‌ಭಿಕ್ಷೆಗಾಗಿ ದೌಡಾಯಿಸುತ್ತಿದ್ದಾರೆ. ಆದರೆ, ಯಾರ ಕುರಿತೂ ಅನುಕಂಪ ಬೇಡ, ಭಾವುಕತನ ಬೇಡ. ನಮಗೆ ಬೇಕಾಗಿರುವುದು ಅಭಿವೃದ್ಧಿ ಅಭಿವೃದ್ಧಿ ಅಭಿವೃದ್ಧಿ.
ಹಾಗಾದರೆ ನೀವು ಮಾಡಬೇಕಾದುದೇನು?

ಈ ಕುರಿತು ಬಂಟ್ವಾಳ ಜೋಡುಮಾರ್ಗ ಕೈಕಂಬದ  ಸರಿದಂತರ ಪ್ರಕಾಶನ ಈ ಸಲಹೆಗಳನ್ನು ನೀಡಿದೆ. ಪ್ರೊ. ರಾಜಮಣಿ ರಾಮಕುಂಜ ಅವರು ಪ್ರಕಾಶನದ ರೂವಾರಿ.

ಜಾಹೀರಾತು

  1. ಜಾತಿ, ಮತವನ್ನು ಮೀರಿದ ಉತ್ತಮ ವ್ಯಕ್ತಿ
  2. ಶುದ್ಧ ಚಾರಿತ್ರ್ಯವಂತ
  3. ಮತದಾರರೊಂದಿಗೆ ನಿರಂತರ ಸಂಪರ್ಕ ಇರಿಸಿಕೊಳ್ಳುವ
  4. ನಮ್ಮ ಅಹವಾಲುಗಳಿಗೆ ತಕ್ಷಣ ಸ್ಪಂದಿಸುವ
  5. ತಿಂಗಳಿಗೆ ಒಂದು ಸಲವಾದರೂ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಖುದ್ದಾಗಿ ಅರಿತುಕೊಳ್ಳುವ
  6. ಅಧಿಕಾರವನ್ನು ಸೇವೆಗಾಗಿ ಇರುವ ಅವಕಾಶ ಎಂದು ಭಾವಿಸುವ
  7. ಮತದಾರರೇ ಪ್ರಭುಗಳು, ನಾವು ಸೇವಕರು ಎಂದು ಭಾವಿಸುವ
  8. ಪ್ಲಾಸ್ಟಿಕ್ ಮುಕ್ತ ಹಾಗೂ ಸ್ವಚ್ಛ ಬಂಟ್ವಾಳದ ಕಲ್ಪನೆಯನ್ನು ಸಾಕಾರಗೊಳಿಸುವ

ಅಭ್ಯರ್ಥಿಗಳನ್ನೇ ಆರಿಸಿ.

  • ಈ ಹಿಂದಿನ ಅನುಭವಗಳೊಂದಿಗೆ ನಿಮ್ಮ ಅಭ್ಯರ್ಥಿಯನ್ನು ತೂಗಿ ನೋಡಿ ಮತದಾನ ಮಾಡಿ.
  • ಒದಗಿ ಬರುವ ಸೌಲಭ್ಯಗಳನ್ನು ದುರುಪಯೋಗಪಡಿಸುವ ಅಥವಾ ತಮ್ಮಸ್ವಾರ್ಥಕ್ಕೆ ಮತ್ತು ಸ್ವಹಿತಕ್ಕೆ ಬಳಸಿಕೊಳ್ಳುವವರು ಬೇಡವೇ ಬೇಡ.
  • ಸಣ್ಣ ಪುಟ್ಟ ಕೆಲಸಗಳಿಗೂ ತಮ್ಮ ಫೊಟೊ ಸಮೇತ ಅಭಿನಂದನಾ ಪ್ಲೆಕ್ಸ್ ಹಾಕಿಕೊಳ್ಳುವವರು ಬೇಕಾಗಿಯೇ ಇಲ್ಲ, ಯಾಕಂದ್ರೆ, ಅದು ನಮ್ಮ ತೆರಿಗೆಯ ಹಣ, ಕೆಲಸ ಮಾಡಿಸಬೇಕಾಗಿರುವುದು ಅವರ ಜವಾಬ್ದಾರಿ.
  • ನೀವು ನೀಡುವ ಒಂದೊಂದು ಮತಗಳೂ ಕೂಡ ನಿಮ್ಮ ತೆರಿಗೆಯ ಹಣದ ರಕ್ಷಣೆಗಾಗಿ, ಅದರ ಸದುಪಯೋಗಕ್ಕಾಗಿ, ಸಮರ್ಥ ಅಭ್ಯರ್ಥಿಗಾಗಿ, ನಿಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ.
  • ಮತದಾನ ನಿಮ್ಮ ಹಕ್ಕು, ಕಡ್ಡಾಯವಾಗಿ ಮತದಾನ ಮಾಡಿ.
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

5 hours ago