ಬಂಟ್ವಾಳ

ಬಿಜೆಪಿ ಯುವ ಮೋರ್ಚಾದಿಂದ ವಾಜಪೇಯಿ ಶ್ರದ್ಧಾಂಜಲಿ

ಬಿಜೆಪಿ ಯುವ ಮೋರ್ಚಾದಿಂದ ಬಿ.ಸಿ.ರೋಡ್ ಬಸ್ ನಿಲ್ದಾಣ ಸಮೀಪ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಸಂದರ್ಭ ನಾಯಕರು ನುಡಿನಮನ ಅರ್ಪಿಸಿದರು.

ಜಾಹೀರಾತು

ಕ್ಷೇತ್ರ ಕಾರ್ಯದರ್ಶಿ ರಮಾನಾಥ ರಾಯಿ ಮಾತನಾಡಿ, ಬಾರತದ ಪರಮ ವೈಭವಕ್ಕಾಗಿ ಅವಿರತ ಶ್ರಮಿಸಿದ ವಿರೋದ ಪಕ್ಷಗಳಿಂದಲೂ ಮೆಚ್ಚುಗೆಯನ್ನು ಪಡೆದ ಈ ನಾಡು ಕಂಡ ರಾಜಕಾರಣ ಮಾಡದ ರಾಜಕಾರಣಿಯಾದ ವಾಜಪೇಯಿಯವರ ಅಗಲಿಕೆ ಈ ದೇಶಕ್ಕೆ ಮತ್ತು ಭಾರತೀಯ ಜನತಾ ಪಾರ್ಟಿಗೆ ತುಂಬಲಾರದ ನಷ್ಟ ಎಂದು ನುಡಿ ನಮನ ಸಲ್ಲಿಸಿದರು. ನಂತರ ಸಾರ್ವಜನಿಕರು ಪುಷ್ಪನಮನ ಸಲ್ಲಿಸಿದರು.

ಎಸ್.ಸಿ.ಮೋರ್ಚಾ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು, ಯುವಮೋರ್ಚಾ ಬಂಟ್ವಾಳ ಕ್ಷೇತ್ರ ಅದ್ಯಕ್ಷ ವಜ್ರನಾಥ ಕಲ್ಲಡ್ಕ, ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿಯಾದ ಸುದರ್ಶನ್ ಬಜ, ಯುವಮೋರ್ಚಾ ಪ್ರದಾನ ಕಾರ್ಯದರ್ಶಿ ಸಂತೋಷ್ ರಾಯಿಬೆಟ್ಟು, ಉಪಾದ್ಯಕ್ಷರಾದ ವಿನೀತ್ ಶೆಟ್ಟಿ, ಕಾರ್ಯದರ್ಶಿಗಳಾದ ಲೋಹಿತ್ ಅಗರಿ, ಕರುಣಾಕರ ಮೆಲ್ಕಾರ್, ಸದಸ್ಯರಾದ ನಾರಾಯಣ ಪೂಜಾರಿ, ಕಾರ್ತಿಕ್ ಬಲ್ಲಾಲ್, ನಿಶಾಂತ್ ಶೆಟ್ಟಿ, ಪ್ರವೀಣ್ ಮಾಡ, ಉಮೇಶ್ ಮಜಲು, ಬಿ ಮೂಡ ಗ್ರಾಮದ ಪ್ರದಾನ ಕಾರ್ಯದರ್ಶಿ ಗಣೇಶ್ ದಾಸ್, ಪ್ರಕಾಶ್ ಕರ್ಲ, ಗುರುದತ್ ನಾಯಕ್, ತಿಲಕ್, ಚಂದ್ರ ಕಲಾಯಿ, ರಕ್ಷಿತ್ ಉಪಸ್ಥಿತರಿದ್ದರು.

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.