ಬಂಟ್ವಾಳ

ಮೊಳಗುತ್ತಿದೆ ಸೈರನ್, ಡ್ಯಾಂನಿಂದ ಜಲಧಾರೆ, ಬಂಟ್ವಾಳ ತಗ್ಗು ಪ್ರದೇಶಗಳಲ್ಲಿ ಇಳಿದಿಲ್ಲ ನೆರೆ

REPORT, PHOTOS and VIDEO by Harish Mambady

ಜಾಹೀರಾತು

ಶಂಭೂರು ಎಎಂಆರ್ ಡ್ಯಾಂ ನಿಂದ ಸೈರನ್ ಮೊಳಗುತ್ತಿದ್ದಂತೆಯೇ ನೇತ್ರಾವತಿ ಬಿರುಸು ಕಾಣಿಸಿಕೊಳ್ಳುತ್ತದೆ. ಅಲ್ಲಿದ್ದ ಕಸ, ಕಡ್ಡಿಗಳನ್ನು ನದಿಯ ಪಕ್ಕದಲ್ಲಿದ್ದ ಜಾಗಕ್ಕೆ ಎಸೆಯುತ್ತದೆ. ಹೀಗೆ ಪಾಣೆಮಂಗಳೂರಿನ ಆಲಡ್ಕ, ಬಂಟ್ವಾಳದ ತೀರ ಪ್ರದೇಶಗಳಾದ ಕಂಚುಕಾರಪೇಟೆ, ಬಡ್ಡಕಟ್ಟೆ ಹಾಗೂ ಸನಿಹದ ಪ್ರದೇಶಗಳೀಗ ಜಲಾವೃತಗೊಂಡಿವೆ. ಈ ಚಿತ್ರಗಳು ಬಂಟ್ವಾಳ ಮತ್ತು ಗೂಡಿನಬಳಿಯನ್ನು ಸಂಪರ್ಕಿಸುವ ಕಂಚುಕಾರಪೇಟೆಯದ್ದು. ಇಲ್ಲೇ ನದಿಯ ಮಟ್ಟ ಅಳೆಯುವ ಮಾಪನವಿದೆ.  ಚಿತ್ರ ಸೆರೆಹಿಡಿದ ಸಂದರ್ಭ 9.6 ಅಡಿಯಲ್ಲಿ ನೇತ್ರಾವತಿ ನೀರು ಹರಿಯುತ್ತಿತ್ತು. ಇದಿನ್ನೂ ಜಾಸ್ತಿಯಾಗಬಹುದು ಅಥವಾ ಕಡಿಮೆಯಾಗಲೂಬಹುದು. ಎಲ್ಲವನ್ನೂ ಕಾಲವೇ ನಿರ್ಧರಿಸುತ್ತದೆಯೇ ಹೊರತು ಯಾವ ಪ್ರಭಾವ, ವಶೀಲಿಯೂ ಅಲ್ಲ!!! ಇದನ್ನು ನಾನು ಮಾಡಿಸಿದ್ದೇನೆ ಎಂದು ಹೇಳಿಕೊಳ್ಳುವವರು ಈ ವಿಷಯದಲ್ಲಂತೂ ಇಲ್ಲ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.