ಬಂಟ್ವಾಳ

ನೀರು ರಸ್ತೆ, ಮನೆಯಂಗಳಕ್ಕೆ ಬಂದರೆ ಹೋಗುವುದಾದರೂ ಎಲ್ಲಿಗೆ?

www.bantwalnews.comಸಂಪಾದಕ: ಹರೀಶ ಮಾಂಬಾಡಿ

ಬಂಟ್ವಾಳ ಪೇಟೆ ಸಹಿತ ನೇತ್ರಾವತಿ ಹರಿಯುವ ನದಿಯ ಪಕ್ಕದಲ್ಲೆಲ್ಲ ಗುರುವಾರ ಪ್ರವಾಹದ ಸ್ಥಿತಿ. ನದಿ ನೀರು ರಸ್ತೆ, ಮನೆಯಂಗಳಕ್ಕೆ ಬಂದರೆ ಹೋಗುವುದಾದರೂ ಎಲ್ಲಿಗೆ ಎಂಬ ಚಿಂತೆ ನದಿ ಪಕ್ಕದ ಜನರದ್ದು. ಬಂಟ್ವಾಳಲ್ಲಿ ಈ ಹಿಂದೆ ಧಾರಾಕಾರ ಮಳೆ ಬಂದು ಪ್ರವಾಹ ಬರುತ್ತಿತ್ತು. ಈಗ ಡ್ಯಾಂ ನಲ್ಲಿ ನೀರು ಬಿಡುವಂಥ ಪರಿಸ್ಥಿತಿ ಉದ್ಭವವಾದ ಕೂಡಲೇ ಪ್ರವಾಹ ಬರುತ್ತದೆ ಎಂಬ ಮಾತು ಕೇಳಿಬರುತ್ತಿದೆ. ಏಕೆಂದರೆ ನೇತ್ರಾವತಿ ಹುಟ್ಟಿದಲ್ಲಿಂದ ಸಮುದ್ರ ಸೇರುವವರೆಗೆ ಡ್ಯಾಮುಗಳದ್ದೇ ತಡೆ. ನದಿಯೂ ಅದರಷ್ಟಕ್ಕೆ ಹರಿಯುವುದಿಲ್ಲ, ನದಿ ಹರಿಯುವ ಜಾಗಗಳ ಪಕ್ಕದಲ್ಲೆ ಅವಕಾಶ ಸಿಕ್ಕಲ್ಲೆಲ್ಲ ಜನರೂ ಖಾಲಿ ಜಾಗ ಬಿಡೋದಿಲ್ಲ. ಹೀಗೆ ನದಿ ನೀರು ಜಾಗ ಸಿಕ್ಕಲ್ಲೆಲ್ಲ ನುಗ್ಗಿಬಿಡುತ್ತದೆ. ಗುರುವಾರ ಬಂಟ್ವಾಳ, ಪಾಣೆಮಂಗಳೂರು ಪರಿಸರದ ಪರಿಸ್ಥಿತಿಯನ್ನು ಛಾಯಾಚಿತ್ರಗಳಲ್ಲೇ ನೋಡುವ ಬನ್ನಿ.

ಜಾಹೀರಾತು

Photo Credit: Kishore Peraje and Deepak Salian

ನೇತ್ರಾವತಿ ನದಿ ಉಕ್ಕಿ ಹರಿದ ಹಿನ್ನೆಲೆಯಲ್ಲಿ ಜನರಿಗೆ ತೊಂದರೆಯಷ್ಟೇ ಅಲ್ಲ, ಜಾನುವಾರುಗಳಿಗೂ ಸಮಸ್ಯೆ. ನದಿ ತೀರದ ಬಂಟ್ವಾಳ , ಪಾಣೆಮಂಗಳೂರು ಪೇಟೆ ಸಮೀಪ ಮನೆಯೊಂದರ ಕುಕ್ಕುಟಗಳೂ ಏನು ಮಾಡುವುದು ಎಂದು ದಾರಿ ತೋರದೆ ಕಂಗಾಲಾಗಿದ್ದವು. ಚಿತ್ರ: ಕಿಶೋರ್ ಪೆರಾಜೆ

 

ಬಂಟ್ವಾಳ ಪೇಟೆಯ ಹಲವು ಪ್ರದೇಶಗಳಲ್ಲಿ ನದಿ ನೀರು ರಸ್ತೆಗೆ ನುಗ್ಗಿದೆ. ರಸ್ತೆಯೊಂದರಲ್ಲಿ ಆಟೊ ಚಾಲಕರು ವಾಹನ ಚಲಾಯಿಸಲು ಪ್ರಯಾಸಪಟ್ಟರು. ಚಿತ್ರ: ದೀಪಕ್ ಸಾಲ್ಯಾನ್

ಬಂಟ್ವಾಳ ಕಂಚಿಕಾರಪೇಟೆಯಿಂದ ಬಂಟ್ವಾಳ ಕಡೆಗೆ ಹೋಗುವ ರಸ್ತೆ ನದಿ ನೀರು ಉಕ್ಕಿ ಹರಿದ ಕಾರಣ ಬ್ಲಾಕ್ ಆಗಿರುವುದು. ಚಿತ್ರ: ದೀಪಕ್ ಸಾಲ್ಯಾನ್

 

ಬಂಟ್ವಾಳ ಪೇಟೆ ಸಮೀಪ ಆಲಡ್ಕದಲ್ಲಿ ನೇತ್ರಾವತಿ ನದಿ ಉಕ್ಕಿ ಹರಿದ ಕಾರಣ ಸಹಾಯಕ್ಕಾಗಿ ಸಾರ್ವಜನಿಕರು ಅಗ್ನಿಶಾಮಕದಳದ ಮೊರೆ ಹೋದರು. ಚಿತ್ರ: ಕಿಶೋರ್ ಪೆರಾಜೆ

ಬಂಟ್ವಾಳದಲ್ಲಿ ಗುರುವಾರ ಸಂಜೆಯ ವೇಳೆಗೆ ಪೇಟೆ ಸನಿಹವೇ ನೇತ್ರಾವತಿ ನದಿ ಪ್ರವಾಹ ಆಗಮಿಸಿ ಸಾರ್ವಜನಿಕರನ್ನು ಆತಂಕಕ್ಕೀಡುಮಾಡಿದೆ. ಚಿತ್ರ: ಕಿಶೋರ್ ಪೆರಾಜೆ

 

ನೇತ್ರಾವತಿ ಪ್ರವಾಹದಿಂದ ಬಂಟ್ವಾಳ ತಾಲೂಕಿನ ಪ್ರಮುಖ ಧಾರ್ಮಿಕ ಕೇಂದ್ರ ಅಜಿಲಮೊಗರುವಿನಲ್ಲಿ ಮಸೀದಿಯ ಬಳಿಯೇ ಪ್ರವಾಹ ಬಂದಿದೆ.

ಬಂಟ್ವಾಳ ಪೇಟೆಗೆ ಹೋಗುವ ರಸ್ತೆಯೇ ಹೀಗೆ..

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

6 hours ago