ವಿಟ್ಲ-ಮಂಗಳೂರು ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಶ್ರೀರಾಮ ಸೌಹಾರ್ದ ಸಹಕಾರಿಯ ಶಾಖಾ ವ್ಯವಸ್ಥಾಪಕ ಜಗದೀಶ್ ಅವರಿಗೆ ಬಸ್ ಇಳಿಯುವ ಸಂದರ್ಭ ದೊರಕಿದ ಪರ್ಸ್ ಅನ್ನು ಅದರ ಮಾಲೀಕರಿಗೆ ಒಪ್ಪಿಸಿದ್ದಾರೆ. ಭಾನುವಾರ ಸಂಜೆ ವಿಟ್ಲ ಮಂಗಳೂರು ಬಸ್ಸಿನಲ್ಲಿ ಪ್ರಯಾಣಿಸಿತ್ತಿದ್ದ ಜಗದೀಶರಿಗೆ ಬಸ್ಸು ಇಳಿಯುವ ಸಂದರ್ಭದಲ್ಲಿ ಪರ್ಸ್ ದೊರಕಿತು.
ಪರಿಶೀಲಿಸಿದಾಗ ಅದರಲ್ಲಿ ಮಾಲೀಕರ ದೂರವಾಣಿ ನಂಬರ್ ಇತ್ತು. ಅದನ್ನು ಕಲ್ಲಡ್ಕದಲ್ಲಿರುವ ಬ್ಯಾಂಕಿನ ಕಚೇರಿಯಲ್ಲಿ ವಾರೀಸುದಾರ ಬೊಳಂತಿಮೊಗರು ಹಮೀದರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀರಾಮ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ ಸುಜಿತ್ ಕೊಟ್ಟಾರಿ, ಕುಶಲ ಚೆಂಡೆ ಉಪಸ್ಥಿತರಿದ್ದರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)