ಪ್ರಮುಖ ಸುದ್ದಿಗಳು

ಮಾಣಿ ಜಂಕ್ಷನ್ ನಲ್ಲೇ ಸೂಚನೆ: ಶಿರಾಡಿಯಲ್ಲಿ ಘನ ವಾಹನ ನಿಷೇಧ ಪಾಲನೆ

ಚಿತ್ರ: ನಿರಂಜನ್ ಭಟ್, ಸೌಮ್ಯ ಸ್ಟುಡಿಯೋ, ಮಾಣಿ

ಶಿರಾಡಿ ಘಾಟಿ ರಸ್ತೆ ದುರಸ್ತಿಯಲ್ಲಿರುವುದರಿಂದ ಘನ ವಾಹನಗಳ ಸಂಚಾರವನ್ನು ನಿಷೇಸಲಾಗಿದ್ದು, ವಾಹನಗಳು ಮೈಸೂರು ರಸ್ತೆ ಕಡೆಯಿಂದ ಸಂಚರಿಸತಕ್ಕದ್ದು.

ವಿಟ್ಲ ಪೊಲೀಸರು ನೀಡಿರುವ ಈ ಪ್ರಕಟಣೆಯ ಬ್ಯಾನರ್ ಬಂಟ್ವಾಳ ತಾಲೂಕಿನ ಮಾಣಿ ಜಂಕ್ಷನ್ ನಲ್ಲಿ ಭಾನುವಾರ ಸಂಜೆಯಿಂದಲೇ ಕಂಡುಬಂದಿದ್ದು, ಅಲ್ಲಿ ನಿಂತಿರುವ ಪೊಲೀಸ್ ಸಿಬ್ಬಂದಿ ಘನ ವಾಹನಗಳಿಗೆ ಮೈಸೂರು ರಸ್ತೆಯಲ್ಲಿ ತೆರಳಲು ಸೂಚನೆ ನೀಡುತ್ತಿರುವುದು ಕಂಡುಬಂತು.

ಜಾಹೀರಾತು

ಶಿರಾಡಿ ಘಾಟಿಯಲ್ಲಿ ಘನ ವಾಹನಗಳಾದ ಲಾರಿ, ಟ್ರಕ್, ಬಸ್ ಇತ್ಯಾದಿಗಳು ಸಂಚರಿಸಲು ಅನಾನುಕೂಲವಾಗಿರುವ ಹಿನ್ನೆಲೆಯಲ್ಲಿ ರಸ್ತೆಯ ದುರಸ್ತಿ ಕಾರ್ಯ ನಡೆಯುತ್ತಿದ್ದು, ಇದು ಸಂಪೂರ್ಣವಾಗುವವರೆಗೂ ಕೇವಲ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ. ಆದರೆ ಇದರ ಅರಿವಿಲ್ಲದೆ ಘನ ವಾಹನಗಳು ಈ ಮಾರ್ಗದಲ್ಲಿ ಸಂಚರಿಸಬಾರದು ಎಂಬ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಸಾಗುವ ಲಾರಿ ಬಸ್ಸುಗಳಿಗೆ ಮಾಣಿಯಲ್ಲೇ ಸೂಚನಾ ಫಲಕ ಹಾಕಲಾಗಿದೆ.

ಮಾಣಿ ಮೂಲಕ ಪುತ್ತೂರು ಮಾರ್ಗವಾಗಿ ಸಂಪಾಜೆ ಘಾಟಿಯ ಮೂಲಕ ಹಾಸನ, ಮೈಸೂರು, ಬೆಂಗಳೂರುಗಳಿಗೆ ಸಂಚರಿಸಲು ಅವಕಾಶವನ್ನು ಘನ ವಾಹನಗಳಿಗೆ ಕಲ್ಪಿಸಲಾಗಿದ್ದು, ಈಗಾಗಲೇ ಜನವರಿಯಿಂದಲೇ ಈ ಸೂಚನ ಪಾಲನೆಯಲ್ಲಿದೆ. ಆದರೆ ಜುಲೈ 15ರಂದು ಶಿರಾಡಿ ಘಾಟಿ ಸಂಚಾರಕ್ಕೆ ಮುಕ್ತವಾಗಿದೆ ಎಂಬ ಹಿನ್ನೆಲೆಯಲ್ಲಿ ಎಲ್ಲ ವಾಹಗಳೂ ಘಾಟಿಯಲ್ಲಿ ಸಂಚರಿಸಲು ಹೊರಟ ಕಾರಣ, ಯಾವುದೆಲ್ಲ ವಾಹನಗಳಿಗೆ ಸಂಚಾರ ಸಾಧ್ಯ ಎಂಬ ಕುರಿತು ಗೊಂದಲಗಳು ಏರ್ಪಟ್ಟಿದ್ದವು. ಆದರೆ ದ.ಕ.ಜಿಲ್ಲಾಧಿಕಾರಿ ಈ ಕುರಿತು ಪ್ರಕಟಣೆ ಹೊರಡಿಸಿ ಶಿರಾಡಿ ವಾಹನ ಸಂಚಾರಕ್ಕೆ ನಿಯಮಗಳನ್ನು ಹೇರಿದ್ದರು.

ಹೆಚ್ಚಿನ ಮಾಹಿತಿಗೆ ಇದನ್ನೂ ಓದಿ

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.