ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಶಾಲೆಯಲ್ಲಿ ಸ್ಕೌಟ್ಸ್, ಗೈಡ್ಸ್,ಬುಲ್ಬುಲ್ಸ್ ಮತ್ತು ಕಬ್ಸ್ ಮಕ್ಕಳು ತಮ್ಮ ಶಿಕ್ಷಕರ ಮಾರ್ಗದರ್ಶನದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ವನಮಹೋತ್ಸವವನ್ನು ಆಚರಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪರಿಸರವಾದಿ ದಿನೇಶ್ ನಾಯಕ್, ಅನೇಕ ಜಾತಿಯ ಸಸ್ಯಗಳ ಪರಿಚಯ ನೀಡಿದುದಲ್ಲದೆ ಅದರ ಉಪಯೋಗವನ್ನು ವಿವರಿಸಿದರು. ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಪರಿಸರ ಸಂಬಂಧಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ, ಮರಗಿಡಗಳ ಮಹತ್ವವನ್ನು ಮನದಟ್ಟು ಮಾಡಿದರು. ಶಾಲಾ ಪ್ರಿನ್ಸಿಪಾಲ್ ರಮಾ ಶಂಕರ್ ಮತ್ತು ಶಿಕ್ಷಕವೃಂದ ಈ ಸಂದರ್ಭ ಹಾಜರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…