ಸರಕಾರಿ, ಕುಮ್ಕಿ, ಪರಂಬೋಳು ಜಮೀನುಗಳಲ್ಲಿ ಮನೆ ಕಟ್ಟಿಕೊಂಡು ವಾಸ್ತವ್ಯ ಇದ್ದು ಹಕ್ಕುಪತ್ರ ಪಡೆಯಲು 94ಸಿ ಮತ್ತು 94ಸಿಸಿ ಯಡಿಯಲ್ಲಿ ಅರ್ಜಿ ನೀಡದೆ ಇರುವ ಅರ್ಜಿದಾರರಿಗೆ ಅರ್ಜಿ ಸಲ್ಲಿಸಲು ಮುಕ್ತಾಯವಾಗಿರುವ ದಿನಾಂಕವನ್ನು ಸರಕಾರ ಮತ್ತೆ ಸಪ್ಟಂಬರ್ 16ರ ವರೆಗೆ ವಿಸ್ತರಿಸಿದೆ. ಸಂಬಂಧಪಟ್ಟ ಸಾರ್ವಜನಿಕರು ತಮ್ಮ ವಾಸದ ಮನೆಯ ಮುಂಭಾಗದಲ್ಲಿ ನಿಂತ ಭಾವಚಿತ್ರ, ವಾಸ್ತವ್ಯದ ದಾಖಲೆಗಳೊಂದಿಗೆ ಬಂಟ್ವಾಳ ತಾಲೂಕು ಕಚೇರಿಯ ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಬೇಕೆಂದು ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…