ಬಂಟ್ವಾಳ

ಮೂಲರಪಟ್ನವೊಂದೇ ಅಲ್ಲ, ಉಳಿದ ಹಳೇ ಸೇತುವೆಗಳೂ ಡೇಂಜರ್!

ನಿನ್ನೆ ಕುಸಿದಿರುವ ಮೂಲರಪಟ್ನ ಸೇತುವೆ ಉಳಿದೆಲ್ಲ ಸೇತುವೆಗಳಲ್ಲಿ ಸಂಚರಿಸುವವರಿಗೆ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದೆ.

ಜಾಹೀರಾತು

ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಪ್ರಕಾರ, ಮಂಗಳೂರಿನ ತಾಲೂಕಿನ ಗುರುಪುರ ಮತ್ತು ಪುಚ್ಚಮುಗೆರು ಹಳೆ ಸೇತುವೆಗಳು ಕೂಡಾ ಶಿಥಿಲಾವ್ಯವಸ್ಥೆಯಲ್ಲಿದೆ.

ಅಧಿಕಾರಿಗಳು ಬಗ್ಗೆ ಎಚ್ಚತ್ತುಕೊಳ್ಳಬೇಕು. ಇಲ್ಲದಿದ್ದರೆ ಫಲ್ಗುಣಿ ಸೇತುವೆಯ ಸ್ಥಿತಿ ಎದುರಾಗಬಹುದು. ಫಲ್ಗುಣಿ ಕುಸಿತಕ್ಕೆ ಅವೈಜ್ಞಾನಿಕ ಮರಳುಗಾರಿಕೆ ಮತ್ತು ಇಲಾಖಾ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂಬುದು ಅವರ ಅಭಿಪ್ರಾಯ.

ಬಂಟ್ವಾಳ, ಮಂಗಳೂರು ತಾಲೂಕುಗಳಲ್ಲಿರುವ ಹಳೇ ಸೇತುವೆಗಳ ಅಧ್ಯಯನ ಮಾಡಿದರೆ, ಇನ್ನಷ್ಟು ಇಂಥ ಸೇತುವೆಗಳು ದೊರಕೀತು ಎಂಬುದು ಸ್ಥಳೀಯರ ಅಭಿಪ್ರಾಯ. ಆದರೆ ಮೂಲರಪಟ್ನ ಸೇತುವೆ ಕುಸಿಯಲು ಸೇತುವೆಯ ವಯಸ್ಸು ಕಾರಣವಲ್ಲ, ಅದಕ್ಕೆ ನಾನಾ ಕಾರಣಗಳಿವೆ. ಈ ಮೊದಲೇ ಸ್ಥಳೀಯರು ಎಚ್ಚರಿಸಿದ್ದರೂ ಜನಪ್ರತಿನಿಧಿಗಳಾಗಲಿ, ಆಡಳಿತವಾಗಲಿ ಗಮನ ಕೊಟ್ಟಿರಲಿಲ್ಲ. ಈಗ ಸೇತುವೆ ಕುಸಿದ ಮೇಲೆ ಬಂದು ನೋಡಿ ಹೋದರೆ ಏನು ಪ್ರಯೋಜನ ಎಂಬುದು ಜನರ ಅನಿಸಿಕೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.