ವಿಟ್ಲ

ವಿಟ್ಲದಲ್ಲಿ ಈದುಲ್ ಫಿತರ್

ವಿಟ್ಲ ಭಾಗದಲ್ಲಿ ಶುಕ್ರವಾರ ಸಡಗರದಲ್ಲಿ ಮುಸ್ಲಿಂ ಬಾಂಧವರು ಈದುಲ್ ಫಿತರ್ ಆಚರಿಸಿದರು.

ಜಾಹೀರಾತು

ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಖತೀಬು ಅಬ್ದುಲ್ ಸಲಾಂ ಲತೀಫಿ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಸಂದೇಶ ನೀಡಿ ಮಾತನಾಡಿ ಹಬ್ಬಗಳ ಆಚರಣೆಗಳು ಇನ್ನೊಬ್ಬರಿಗೆ ತೊಂದರೆ ನೀಡುವುದಲ್ಲ. ಇಸ್ಲಾಂ ನಿಷೇಧ ಮಾಡಿದ ಕಾರ್ಯಗಳನ್ನು ಮಾಡುವುದಲ್ಲ. ಅನಾಚಾರ ವಿಷಯಗಳಿಗೆ ಹೋಗುವುದಲ್ಲ ಪ್ರತಿಯೊಬ್ಬರು ಐಕ್ಯತೆಯಿಂದ ಬದುಕುವುದಾಗಿದೆ ಎಂದು ಹೇಳಿದರು. ಲೋಕದಲ್ಲಿ ಎಲ್ಲಿಯಾದರೂ ಒಬ್ಬರಿಗೆ ಸಮಸ್ಯೆಯಾದರೆ ಅದು ನಮ್ಮ ಸಮಸ್ಯೆ ಎಂದು ಭಾವಿಸಿ ಅವರಿಗೆ ಸಹಾಯಹಸ್ತ ನೀಡಬೇಕು. ಇದರಿಂದ ನೈಜ ಮುಸಲ್ಮಾನನಾಗಿ ಜೀವಿಸಲು ಸಾಧ್ಯ. ಪ್ರತಿಯೊಬ್ಬರ ದುಃಖದಲ್ಲಿ ಭಾಗಿಯಾಗುವುದು ಪ್ರತಿಯೊಬ್ಬನ ಕರ್ತವ್ಯವಾಗಿದೆ ಎಂದು ಹೇಳಿದರು.

ವಿಟ್ಲ ಸಮೀಪದ ಕೆಲಿಂಜ ಮುಹಿಯ್ಯದ್ದೀನ್ ಜುಮ್ಮಾ ಮಸೀದಿಯಲ್ಲಿ ಎಸ್.ಎಮ್, ಅಬ್ಬಾಸ್ ದಾರಿಮಿ ಕೆಲಿಂಜ ಅವರು ಈದ್ ನಮಾಜ್ಗೆ ನೇತೃತ್ವ ವಹಿಸಿದ್ದರು. ವಿಶೇಷ ಪ್ರಾರ್ಥನೆಯ ಮೊದಲು ಈದ್ ಸಂದೇಶ ನೀಡಿ ಈದ್ಉಲ್ ಫಿತರ್ ಹಬ್ಬವು ಶಾಂತಿ ಸಮದಾನ ಸಹೋದರತೆಯ ಸಂಕೇತವಾಗಿದೆ. ಪ್ರತಿಯೊಬ್ಬರೂ ದ್ವೇಷ ವೈರಾಗ್ಯವನ್ನು ಬಿಟ್ಟು ಶಾಂತಿಯಿಂದ ಬಾಳಿ ಮತ್ತು ಕುಟುಂಬ ಬಂಧವನ್ನು ಬಲಪಡಿಸಿ ಒಗ್ಗಾಟಾಗಿ ಬಾಳಿ ಅಲ್ಲಾಹುವಿನ ದಾಸರಾಗಿ ಎಂದು ಹೇಳಿದರು.

ಬಳಿಕ ಎಸ್ಕೆಎಸ್ಎಸ್ಎಫ್ ಕೆಲಿಂಜ ಶಾಖೆ ವತಿಯಿಂದ  ಈದ್ ಮಿಲನ್ ಆಚರಿಸಿದರು. ಮಸೀದಿಯಲ್ಲಿ ಹಾಗೂ ವಾಹನದಲ್ಲಿ ಹೋಗುವ ಪ್ರತಿಯೊಬ್ಬರಿಗೆ  ಸಿಹಿತಿಂಡಿ ವಿತರಿಸಿ ಈದ್ ಹಬ್ಬದ ಶುಭಾಶಯ ಕೋರಿದರು.

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.