ಬಂಟ್ವಾಳ

ಮೀಸಲಾತಿಯಲ್ಲಿ ಗೊಂದಲ: ಎಸ್.ಡಿ.ಪಿ.ಐ. ಮನವಿ

ಸೆಪ್ಟಂಬರ್‌ನಲ್ಲಿ ನಡೆಸಲುದ್ದೇಶಿಸಿರುವ ಬಂಟ್ವಾಳ ಪುರಸಭೆಯ ಚುನಾವಣೆಗೆ ಸಂಬಂಧಿಸಿದಂತೆ ಪುರಸಭೆಯ ವ್ಯಾಪಿಯನ್ನು ಮರುವಿಂಗಡಿಸಿ ವಾರ್ಡುವಾರು ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಆದರೆ ಈ ಮೀಸಲಾತಿಯು ಸಂಪೂರ್ಣಗೊಂದಲವಾಗಿದ್ದು, ಅದನ್ನು ಸರಿಪಡಿಸುವಂತೆ ಒತ್ತಾಯಿಸಿ ಎಸ್‌ಡಿಪಿಐ ನಿಯೋಗವು ಗುರುವಾರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿತು.

ಈಗಾಗಲೇ ಪ್ರಕಟಗೊಂಡ 27 ವಾರ್ಡ್ ಗಳಲ್ಲಿ 12 ಮಹಿಳಾ ಮೀಸಲಾತಿ ನೀಡಿದ್ದು, ಅದರಲ್ಲೂ ಮುಸ್ಲಿಮ್ ಪ್ರಾಬಲ್ಯವಿರುವ ವಾರ್ಡ್‌ಗಳ ೭ ವಾರ್ಡ್‌ಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲಾಗಿದೆ. ಅಲ್ಲದೆ ಮುಸ್ಲಿಮರೇತರ ಮತದಾರರೇ ಇಲ್ಲದ ವಾರ್ಡ್ ಗಳಲ್ಲಿ ಮುಸ್ಲಿಮರೇತರರಿಗೆ ಮೀಸಲಿರಿಸಲಾಗಿರುವ ವಿಚಾರವನ್ನು ನಿಯೋಗವು ಜಿಲ್ಲಾಧಿಕಾರಿಯವರಿಗೆ ಮನವಿಯ ಮೂಲಕ ತಿಳಿಸಿದೆ.

ಜಾಹೀರಾತು

ಪ್ರಸಕ್ತ ಗೊಂದಲಮಯ ಮೀಸಲಾತಿಯನ್ನು ರದ್ದುಪಡಿಸಿ ಜನಸಂಖ್ಯಾಧರಿತ ಮೀಸಲಾತಿ ಪ್ರಕಟಿಸಲು ಮನವಿ ಮೂಲಕ ಒತ್ತಾಯಿಸಲಾಗಿದೆ.
ಈ ನಿಯೋಗದಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೊಕಟ್ಟೆ, ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಜಿಲ್ಲಾಕೋಶಾಧಿಕಾರಿ ಇಕ್ಬಾಲ್ ಐಎಂಆರ್, ಕ್ಷೇತ್ರಾಧ್ಯಕ್ಷ ಶಾಹುಲ್ ಎಸ್.ಎಚ್., ಪುರಸಭಾ ಸಮಿತಿ ಅಧ್ಯಕ್ಷ ಮುನಿಶ್ ಅಲಿ, ಕಾರ್ಯದರ್ಶಿ ಸಿದ್ದೀಕ್ ನಂದರಬೆಟ್ಟು ಮೊದಲಾದವರು ಹಾಜರಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.