ನಾಟಿ ವೈದ್ಯ, ಕಲ್ಲಡ್ಕ ನಿವಾಸಿ, ಮುಲಾರು ಧರ್ಣಪ್ಪ ಪಂಡಿತ (75) ಖಾಸಗಿ ಆಸ್ಪತ್ರೆಯಲ್ಲಿ ಜೂನ್ 14ರಂದು ನಿಧನ ಹೊಂದಿದರು.
ಕಳೆದ 50 ವರ್ಷಗಳಿಂದ ನಾಟಿ ವೈದ್ಯರಾಗಿ ಪ್ರಸಿದ್ಧರಾಗಿದ್ದ ಪಂಡಿತರ ಬಳಿ ಪಾರ್ಶ್ವವಾಯು ಔಷಧಕ್ಕಾಗಿ ದೂರದೂರಿನಿಂದ ರೋಗಿಗಳು ಬರುತ್ತಿದ್ದರು. ಕಂಬಳದ ಕೋಣಗಳ ಯಜಮಾನರಾಗಿಯೂ ಪ್ರಸಿದ್ಧಿ ಪಡೆದಿದ್ದ ಧರ್ಣಪ್ಪರು, ಸ್ಥಳೀಯವಾಗಿ ಪ್ರಸಿದ್ಧಿ ಪಡೆದವರು.
ಪತ್ನಿ, ಮೂವರು ಪುತ್ರರು, ಮೂವರು ಪುತ್ರಿಯರನ್ನು ಅವರು ಅಗಲಿದ್ದಾರೆ. ಕಲ್ಲಡ್ಕದಲ್ಲಿ ಸತ್ಯದೇವತಾ ಗುಡಿಯನ್ನು ಸ್ಥಾಪಿಸಿ, ಸತ್ಯದೇವತಾ ವೈದ್ಯಾಲಯದ ಮೂಲಕ ಔಷಧಿ ನೀಡುತ್ತಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…