ಬಂಟ್ವಾಳ ತಾಲೂಕಿನಲ್ಲಿ ಮಂಗಳವಾರ ಸುರಿದ ಭಾರಿ ಗಾಳಿ ಮಳೆಗೆ ತಾಲೂಕಿನ ಹಲವೆಡೆ ಹಾನಿಗಳಾಗಿವೆ. ಕರಿಯಂಗಳ ಗ್ರಾಮದ ಕಿನ್ನಿಗುಡ್ಡೆ ಎಂಬಲ್ಲಿ ಹೊನ್ನಯ್ಯ ಎಂಬವರ ಪತ್ನಿ ಮಂಜು ಎಂಬವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದ್ದು ಸುಮಾರು50 ಸಾವಿರದಷ್ಟು ನಷ್ಟ ಉಂಟಾಗಿದೆ.
ಬಿ.ಮೂಡ ಗ್ರಾಮದ ಶಿವಯ್ಯ ಎಂಬವರ ಮಗ ಸಾಧು ಎಂಬವರ ಮನೆಗೆ ಹತ್ತಿರದ ಆವರಣ ಗೋಡೆ ಬಿದ್ದು ನಷ್ಟ ಉಂಟಾಗಿದೆ. ಬಿ ಮೂಡ ಗ್ರಾಮದ ಕಡಪಿಕರಿಯ ಎಂಬಲ್ಲಿ ಮೋನಪ್ಪ ಎಂಬವರ ಮಗ ಭಾಸ್ಕರ ಎಂಬವರ ಮನೆಯ ಅವರಣ ಗೊಡೆ ಬಿದ್ದು ಜರಿದು ಮನೆ ಜಕಂ ಹಾಗೂ ಅಡಿಕೆ ಮರಕ್ಕೆ ಹಾನಿ ಉಂಟಾಗಿದ್ದು ಸುಮಾರು 50 ಸಾವಿರ ರೂ ನಷ್ಟ ಉಂಟಾಗಿದೆ.
ಬಿ ಮೂಡ ಗ್ರಾಮದ ಪಲ್ಲಮಜಲು ಸುಧಾಕರ್ ಎಂಬವರ ಹೆಂಡತಿ ವಿದ್ಯಾ ಎಂಬವರ ಅವಾರಣ ಗೋಡೆ ಬಿದ್ದು 50 ಸಾವಿರ ರೂ ನಷ್ಟ ಉಂಟಾಗಿದೆ. ಅಬ್ಲುಲ್ ಲತೀಪ್ ನಂದರಬೆಟ್ಟು ಮನೆಗೆ ಆವರಣ ಗೋಡೆ ಕುಸಿದಿದೆ.
ಘಟನಾ ಸ್ಥಳಗಳಿಗೆ ಪ್ರತ್ಯೇಕವಾಗಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಗ್ರಾಮ ಲೆಕ್ಕಾಧಿಕಾರಿ ಪ್ರಶಾಂತ್, ಶಿವಾನಂದ ನಾಟೇಕಾರ್, ಸಿಬ್ಬಂದಿಗಳಾದ ಅಶೋಕ್, ರೂಪೇಶ್ ಕರಿಯಂಗಳ, ಸದಾಶಿವ ಕೈಕಂಬ’ ಅಶೋಕ್’ ಶೀತಲ್, ಚಂದ್ರಶೇಖರ್ ಭೇಟಿ ನೀಡಿ ಸ್ಥಳ ಮಹಜರು ಮಾಡಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…