ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನ ಫ್ಲೈ ಓವರ್ ಬಳಿ ಬಿಜೆಪಿ ಕಾರ್ಯಕರ್ತರು ಗುರುವಾರ ಬೆಳಗ್ಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ ಬಂಟ್ವಾಳ, ಮೋನಪ್ಪ ದೇವಸ್ಯ ಪ್ರಮುಖರಾದ ಮಹಾಬಲ ಶೆಟ್ಟಿ ಎಂ, ಮಚ್ಚೇಂದ್ರ ಸಾಲ್ಯಾನ್, ಸದಾನಂದ ಗೌಡ, ಉಮೇಶ್ ಅರಳ, ಜಯರಾಮ್ ಭಂಡಾರಿ , ರಮೇಶ್ ಸಾಲ್ಯಾನ್, ವಿಜಯ ರೈ, ಮನೋಜ್ ಕಳ್ಳಿಗೆ, ಗುರುದತ್ ನಾಯಕ್, ಶಿವ ಕುಪ್ಪಿಲ, ರವಿಕಿರಣ್, ಶ್ರೀನಿವಾಸ್, ತಿಮ್ಮಪ್ಪ ಅಂಚನ್, ಭಾಸ್ಕರ್,ಸಂಜೀವ ಉಪಸ್ಥಿತರಿದ್ದರು. ಅದಾದ ಬಳಿಕ ಪಟಾಕಿ ಸಿಡಿಸಿದ ಜಾಗವನ್ನು ಕಾರ್ಯಕರ್ತರೇ ಸ್ವಚ್ಛಗೊಳಿಸಿದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…