ಬಂಟ್ವಾಳ

ಸಾಮಾಜಿಕ ನ್ಯಾಯ ಒದಗಿಸಲು ಬದ್ದ : ರಾಜೇಶ್ ನಾಯ್ಕ್

ತನ್ನನ್ನು ಗೆಲ್ಲಿಸಿಕೊಟ್ಟಲ್ಲಿ ಜಾತಿ,ಮತ, ಬೇಧ ಮರೆತು ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಲು ಬದ್ದನಾಗಿರುವುದಾಗಿ  ಬಂಟ್ವಾಳ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಯು.ರಾಜೇಶ್ ನಾಯ್ಕ್ ಭರವಸೆ ನೀಡಿದ್ದಾರೆ.

ಜಾಹೀರಾತು

ಬಂಟ್ವಾಳ ಕ್ಷೇತ್ರದ  ಸಂಗಬೆಟ್ಟು,ಕರ್ಪೆ,ನೆಲ್ಲಿಗುಡ್ಡೆ, ಕಲ್ಲಾಪು,ನೆಕ್ಲಾಜೆ,ಕುಟ್ಟಿಕಳ ಪರಿಸರದಲ್ಲಿ ಬಿರುಸಿನ  ಮತಯಾಚನೆಗೈದ ರಾಜೇಶ್ ನಾಯ್ಕ್  ಬಳಿಕ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ತನಗೆ ಜನತೆ ಆಶೀರ್ವಾದ ಮಾಡಿದರೆ ಈ ಭಾಗದ   ಸರ್ವತ್ತೋಮುಖ ಅಭಿವೃದ್ದಿಗೆ ಶ್ರಮಿಸುವುದರ ಜತೆಗೆ ಕಾರ್ಯಕರ್ತರು ಹಾಗೂ ಮತದಾರರ ಸೇವೆ ಹಗಲಿರುಳು ಶ್ರಮಿಸುವುದಾಗಿ ಆಶ್ವಾಸನೆ ನೀಡಿದರು.

ನಾಗರಿಕ ಸಮಾಜದಲ್ಲಿ ಜನರು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಿಸಲು  ಆದ್ಯತೆ ನೀಡುವುದರ ಜೊತೆಗೆ ಬಂಟ್ವಾಳದಲ್ಲಿ ಭಯಮುಕ್ತ ವಾತಾವರಣ ಕಲ್ಪಿಸಲಾಗುವುದು ಎಂದರು.

ಬಂಟ್ವಾಳದಲ್ಲಿಯು ಜನತೆಪರಿವರ್ತನೆಯನ್ನು ಬಯಸಿದ್ದು,ಈ ಬಾರಿ ಅತ್ಯಧಿಕ ಬಹುಮತದಿಂದ ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ ಎಂದು ರಾಜೇಶ್ ನಾಯ್ಕ್ ವಿಶ್ವಾಸ ವ್ಯಕ್ತ ಪಡಿಸಿದರು.   ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸದಸ್ಯ ಪ್ರಭಾಕರ ಪ್ರಭು,ಪಕ್ಷದ ಪ್ರಮುಖ ಕಾರ್ಯಕರ್ತರಾದ ತೇಜಸ್ ಪೂಜಾರಿ,ಹರೀಶ್ ಪೂಜಾರಿ,ದಾಮೋದರ ಪೂಜಾರಿ,ಗಿರೀಶ್,ಕೃಷ್ಣಪ್ಪ ಪೂಜಾರಿ,ಹರೀಶ್ ಪಾದೆ, ನವೀನ್, ರಂಜೀತ್, ಉಮಾನಾಥ್ ಮೊದಲಾದವರು ಮತಯಾಚನೆಯಲ್ಲಿ ಭಾಗವಹಿಸಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.