ಬಂಟ್ವಾಳ

ಕೊನೇ ದಿನ 5, ಒಟ್ಟು 13 ನಾಮಪತ್ರ ಸಲ್ಲಿಕೆ

www.bantwalnews.com

ಜಾಹೀರಾತು

ವಿಧಾನಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆಯ ಕೊನೇ ದಿನವಾದ ಮಂಗಳವಾರ ಬಂಟ್ವಾಳ ಕ್ಷೇತ್ರದಲ್ಲಿ 5 ನಾಮಪತ್ರಗಳು ಒಂದೇ ದಿನ ಸಲ್ಲಿಕೆಯಾಗಿದ್ದು, ಒಟ್ಟು 13 ನಾಮಪತ್ರಗಳು ಸ್ವೀಕಾರವಾಗಿವೆ.

ಈ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ, ಎಂಇಪಿ ಅಭ್ಯರ್ಥಿ ಶಮೀರ್ ಹಾಗೂ ಬಿಜೆಪಿ ಡಮ್ಮಿ ಅಭ್ಯರ್ಥಿ ತುಂಗಪ್ಪ ಬಂಗೇರ ಅವರು ಒಂದು ಸೆಟ್ ನಾಮಪತ್ರ ಸಲ್ಲಿಸಿದ್ದರೆ, ಉಳಿದಂತೆ ಬಿಜೆಪಿಯ ಯು.ರಾಜೇಶ್ ನಾಯ್ಕ್, ಎಸ್ ಡಿಪಿಐ ಅಭ್ಯರ್ಥಿಗಳಾದ ರಿಯಾಜ್, ಅಬ್ದುಲ್ ಮಜೀದ್ ತಲಾ ಎರಡು ಸೆಟ್ ಗಳಂತೆ ನಾಮಪತ್ರ ಸಲ್ಲಿಸಿದ್ದಾರೆ. ಇಬ್ರಾಹಿಂ ಕೈಲಾರ್ ಅವರು ಜೆಡಿಎಸ್ ಮತ್ತು ಪಕ್ಷೇತರನಾಗಿ ಪ್ರತ್ಯೇಕ ನಾಮಪತ್ರ ಸಲ್ಲಿಸಿದ್ದಾರೆ.  ನಾಮಪತ್ರ ಸಲ್ಲಿಕೆಯ ಮೊದಲನೇ ದಿನ ಜೆಡಿಯುನಿಂದ ನಾಮಪತ್ರ ಸಲ್ಲಿಸಿದ್ದ ಬಾಲಕೃಷ್ಣ ಪೂಜಾರಿ ಕೊನೆಯ ದಿನ ಲೋಕಸೇವಾ ದಳದಿಂದ ನಾಮಪತ್ರ ಸಲ್ಲಿಸಿ ಗಮನ ಸೆಳೆದರು.

ಮಂಗಳವಾರ ಬಂಟ್ವಾಳದಲ್ಲಿ ನಾಮಪತ್ರ ಸಲ್ಲಿಸಿದವರು ಇವರು: ಶಮೀರ್ (ಎಂಇಪಿ), ರಾಜೇಶ್ ನಾಯ್ಕ್ (ಬಿಜೆಪಿ), ಅಬ್ದುಲ್ ಮಜೀದ್ ಖಾನ್ (ಎಸ್.ಡಿ.ಪಿ.ಐ), ಬಾಲಕೃಷ್ಣ ಪೂಜಾರಿ (ಲೋಕ ಆವಾಜ್ ದಳ), ತುಂಗಪ್ಪ ಬಂಗೇರ (ಬಿಜೆಪಿ).

ಕೇಂದ್ರ ಚುನಾವಣಾ ಆಯೋಗದ ವೀಕ್ಷಕ ವಿಕಾಸ್ ಯಾದವ್ ಮಂಗಳವಾರ ಬಂಟ್ವಾಳ ಮಿನಿ ವಿಧಾನಸೌಧಕ್ಕೆ ಆಗಮಿಸಿ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಅವರೊಂದಿಗೆ ಮಾತುಕತೆ ನಡೆಸಿ, ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.