ಜಿಲ್ಲಾ ಸುದ್ದಿ

ದ.ಕ. ಜಿಲ್ಲೆಯಲ್ಲಿ 6 ಬಂಟ ಅಭ್ಯರ್ಥಿಗಳಿಗೆ ಬಿಜೆಪಿ, ಕಾಂಗ್ರೆಸ್ ಮಣೆ

www.bantwalnews.com

 ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಘೋಷಿತ ಅಭ್ಯರ್ಥಿಗಳನ್ನು ಗಮನಿಸಿದರೆ ಸುಳ್ಯ ಮೀಸಲು ಕ್ಷೇತ್ರ ಹೊರತುಪಡಿಸಿದರೆ, ಕಾಂಗ್ರೆಸ್ ಪಕ್ಷದಿಂದ ಇಬ್ಬರು ಬಂಟ ಸಮುದಾಯದವರು (ರಮಾನಾಥ ರೈ, ಶಕುಂತಳಾ ಶೆಟ್ಟಿ), ನಾಲ್ವರು ಅಲ್ಪಸಂಖ್ಯಾತ ಸಮುದಾಯದವರು (ಖಾದರ್, ಬಾವಾ, ಅಭಯಚಂದ್ರ, ಲೋಬೊ) ಹಾಗೂ ಒಬ್ಬರು ಬಿಲ್ಲವ ಸಮುದಾಯದವರು (ವಸಂತ ಬಂಗೇರ) ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಿಂದ ನಾಲ್ವರು ಬಂಟ ಸಮುದಾಯದವರು (ಭರತ್ ಶೆಟ್ಟಿ, ಸಂತೋಷ್ ರೈ, ರಾಜೇಶ್ ನಾಯ್ಕ್, ಹರೀಶ್ ಪೂಂಜ) ಒಬ್ಬರು ಬಿಲ್ಲವ (ಉಮಾನಾಥ ಕೋಟ್ಯಾನ್), ಒಬ್ಬರು ಗೌಡಸಾರಸ್ವತ ಬ್ರಾಹ್ಮಣ (ವೇದವ್ಯಾಸ ಕಾಮತ್) ಮತ್ತು ಒಬ್ಬರು ಒಕ್ಕಲಿಗ (ಸಂಜೀವ ಮಠಂದೂರು) ರು ಟಿಕೆಟ್ ಪಡೆದಿದ್ದಾರೆ. ಒಟ್ಟಾರೆಯಾಗಿ ಬಂಟ ಸಮುದಾಯದ ಅಭ್ಯರ್ಥಿಗಳು 6, ಅಲ್ಪಸಂಖ್ಯಾತರು 4(ಮುಸ್ಲಿಂ 2, ಕ್ರೈಸ್ತರು 1, ಜೈನರು 1,) ಬಿಲ್ಲವರು 2, ಒಕ್ಕಲಿಗರು 1, ಜಿಎಸ್ ಬಿ -1 ಅಭ್ಯರ್ಥಿಗಳು ಕಣಕ್ಕಿಳಿದಿದ್ದರೆ, ಇವರಲ್ಲಿ ಬಂಟ-ಬಂಟರ ಮುಖಾಮುಖಿ ಬಂಟ್ವಾಳ ಕ್ಷೇತ್ರದಲ್ಲಿ ಆಗುವುದು ಗಮನಾರ್ಹ.

  • ಮಂಗಳೂರು ಉತ್ತರ: ಮೊಯ್ದೀನ್ ಬಾವ (ಕಾಂಗ್ರೆಸ್) ಡಾ. ಭರತ್ ಶೆಟ್ಟಿ (ಬಿಜೆಪಿ)
  • ಮಂಗಳೂರು ದಕ್ಷಿಣ: ಜೆ.ಆರ್.ಲೋಬೊ(ಕಾಂಗ್ರೆಸ್), ವೇದವ್ಯಾಸ ಕಾಮತ್ (ಬಿಜೆಪಿ)
  • ಮಂಗಳೂರು: ಯು.ಟಿ.ಖಾದರ್ (ಕಾಂಗ್ರೆಸ್), ಸಂತೋಷ್ ಕುಮಾರ್ ರೈ(ಬಿಜೆಪಿ)
  • ಬಂಟ್ವಾಳ: ರಮಾನಾಥ ರೈ (ಕಾಂಗ್ರೆಸ್), ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು (ಬಿಜೆಪಿ)
  • ಸುಳ್ಯ: ಅಂಗಾರ (ಬಿಜೆಪಿ), ಡಾ. ರಘು (ಕಾಂಗ್ರೆಸ್)
  • ಬೆಳ್ತಂಗಡಿ: ವಸಂತ ಬಂಗೇರ (ಕಾಂಗ್ರೆಸ್), ಹರೀಶ್ ಪೂಂಜ (ಬಿಜೆಪಿ)
  • ಪುತ್ತೂರು: ಶಕುಂತಳಾ ಶೆಟ್ಟಿ (ಕಾಂಗ್ರೆಸ್), ಸಂಜೀವ ಮಠಂದೂರು (ಬಿಜೆಪಿ)
  • ಮೂಡುಬಿದಿರೆ: ಅಭಯಚಂದ್ರ ಜೈನ್ (ಕಾಂಗ್ರೆಸ್), ಉಮಾನಾಥ ಕೋಟ್ಯಾನ್ (ಬಿಜೆಪಿ)
ಜಾಹೀರಾತು
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.