ಬಂಟ್ವಾಳ

ಬಿ.ಸಿ.ರೋಡಲ್ಲಿ ಬಿಗಡಾಯಿಸಿದೆ ಕುಡಿಯುವ ನೀರಿನ ಸಮಸ್ಯೆ

www.bantwalnews.comಸಂಪಾದಕ: ಹರೀಶ ಮಾಂಬಾಡಿ

ಜಾಹೀರಾತು

ನೀರಿನ ಸಮಸ್ಯೆ ಬಿ.ಸಿ.ರೋಡಿನಲ್ಲಿ ಬಿಗಡಾಯಿಸಿದೆ. ಶನಿವಾರದಿಂದ ಗುರುವಾರದವರೆಗೆ ಆರು ದಿನಗಳ ಕಾಲ ನೀರಿಲ್ಲದೆ ಜನರು ಪರದಾಡಿದ್ದಾರೆ. ಬೋರ್ ವೆಲ್, ಸಂಪ್ ಇದ್ದವರಿಗೆ ಅದರ ಬಿಸಿ ಗೊತ್ತಾಗಿಲ್ಲ. ಆದರೆ ಉಳಿದವರು ಬೆವರು ಹರಿಸಿದ್ದೇ ಬಂತು, ನೀರಿಲ್ಲ.

ಬಿ.ಸಿ.ರೋಡಿನಲ್ಲಿ ಈ ರೀತಿಯ ನೀರಿನ ಸಮಸ್ಯೆ ಉದ್ಭವವಾಗಿ ಕೆಲವು ವರ್ಷಗಳೇ ಸಂದವು. ಪೈಪ್ ಲೈನ್ ನಲ್ಲಿ ಸೋರಿಕೆಯಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂದು ಅಧಿಕಾರಗಳು ತಿಳಿಸಿದ್ದಾರೆ. ಮುನ್ಸಿಪಾಲಿಟಿಯಿಂದ ಟ್ಯಾಂಕರುಗಳಲ್ಲಿ ನೀರು ಸರಬರಾಜು ಅಗತ್ಯವಿದ್ದೆಡೆ ಮಾಡಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ಮುನ್ಸಿಪಾಲಿಟಿಯಿಂದ ನೀರು ಸರಬರಾಜು ಮಾಡುವ ಹಳೇ ಪೈಪ್ ಲೈನಿನಲ್ಲಿ ಯಾವುದೋ ಒಂದು ಕಡೆ ಸೋರಿಕೆಯಾಗಿ ಎಲ್ಲಿಗೆ ಪೂರೈಕೆಯಾಗಬೇಕಿತ್ತೋ ಅಲ್ಲಿಗೆ ನೀರು ಬರುವುದು ನಿಂತು ಹೋಯಿತು. ಆದರೆ ಸಮಸ್ಯೆ ಎಲ್ಲಿ ಎಂಬ ಹುಡುಕಾಟಕ್ಕೆ ನಾಲ್ಕು ದಿನಗಳು ಬೇಕಾದವು. ಕೊನೆಗೂ ಫ್ಲೈ ಓವರ್ ಪಕ್ಕದ ಭಾಗದಲ್ಲಿ ತೊಂದರೆ ಇರುವುದಾಗಿ ಪತ್ತೆಹಚ್ಚಿದ್ದಾರೆ ಅಧಿಕಾರಿಗಳು.

ಗೂಡಿನಬಳಿಯಲ್ಲಿರುವ ನೆಲಮಟ್ಟದ ಸಂಗ್ರಹಾಗಾರದಿಂದ ಬಿ.ಸಿ.ರೋಡಿಗೆ ನೀರು ಪುರಸಭೆಯ ಪೈಪ್ ಲೈನಿನಲ್ಲಿ ಸರಬರಾಜಾಗುತ್ತಿದೆ. ಅಲ್ಲಿಂದ ಅದು ಕೈಕಂಬದ ಕಡೆಗೆ ಸಾಗುತ್ತದೆ. ಆದರೆ ಬಿ.ಸಿ.ರೋಡಿನಲ್ಲಿ ಪೈಪ್ ಲೈನ್ ನಲ್ಲಿ ಸಮಸ್ಯೆ ಇರುವ ಕಾರಣ, ಹಳೇ ಪೈಪು ಲೈನ್ ದುರಸ್ತಿ ಮಾಡುವ ಕಾರಣದಿಂದ ಹೊಸದಾಗಿ ಒಳಚರಂಡಿ ಮಂಡಳಿ ಹಾಕಿದ ಪೈಪುಲೈನ್ ಗಳ ಸಹಾಯದಿಂದ ನೀರು ಸರಬರಾಜು ಮಾಡುವುದು ಎಂದು ತೀರ್ಮಾನಿಸಲಾಯಿತು. ಇಷ್ಟರವರೆಗೆ ಹಳೇ ಪೈಪುಲೈನುಗಳಲ್ಲಿ ನೀರು ಸಾಗಿಸುತ್ತಿದ್ದು, ಇದೀಗ ಕ.ನ.ನೀ.ಸ.ಒ.ಮಂಡಳಿಯ ಹೊಸ ಪೈಪುಲೈನುಗಳಲ್ಲಿ ನೀರು ಸರಬರಾಜು ಮಾಡಲಾಯಿತು. ಬಿ.ಸಿ.ರೋಡಿನ ವಿಜಯಾ ಬ್ಯಾಂಕಿನ ಬಳಿ ಮತ್ತೆ ಹಳೇ ಪೈಪುಲೈನ್ (ಪುರಸಭೆಯದ್ದು) ಗೆ ಅದನ್ನು ಲಿಂಕ್ ಮಾಡುವ ಕಾರ್ಯ ನಡೆಸಲಾಗುತ್ತಿದೆ. ಗುರುವಾರ ರಾತ್ರಿ ಇನ್ನೂ ಬಾಕಿ ಇದೆ. ಶುಕ್ರವಾರ ಬೆಳಗ್ಗೆ ನಲ್ಲಿಗಳಲ್ಲಿ ನೀರು ಹರಿಯುತ್ತದೋ ನೋಡಬೇಕು…!!!

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಬಿ.ವಿ.ಕಾರಂತ ಹುಟ್ಟಿದ ತಾಲೂಕಲ್ಲಿ ಸುಸಜ್ಜಿತ ರಂಗಮಂದಿರವೇ ಇಲ್ಲ

| ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲು ಪರದಾಟ | ತಾಲೂಕು ಕೇಂದ್ರದಲ್ಲಿ ಜಾಗವೇ ದೊರಕಿಲ್ಲ (more…)

16 hours ago