ನಾಯಿಲ ಕಾಪಿಕಾಡ್ ಸುಂದರ ಮೂಲ್ಯ ಅವರ ಮಗ ಗಿರೀಶ್ ಕುಲಾಲ್ ಅಪಘಾತದಲ್ಲಿ ಕಾಲು ಮುರಿತಕ್ಕೊಳಗೊಂಡು ನಡೆಯಲಾಗದ ಸ್ಧಿತಿಯಲ್ಲಿ ಮನೆಯಲ್ಲಿದ್ದು ಇವರಿಗೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತು ಪಾಣೆಮಂಗಳೂರು ಭಾರತೀಯ ಜನತಾ ಪಾರ್ಟಿಯ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.
ಮುಖಂಡರಾದ ರಾಜೇಶ ನಾಯಕ್ ಉಳಿಪ್ಪಾಡಿ ಗುತ್ತು, ಜನಾರ್ಧನ ಕುಲಾಲ್ ಸುದರ್ಶನ್ ಮೆಲ್ಕಾರ್, ಸಚಿನ್ ಮೆಲ್ಕಾರ್, ಸಂದೀಪ್ ಪಾಣೆಮಂಗಳೂರು, ಭಾಸ್ಕರ ಪಾಣೆಮಂಗಳೂರು, ಪ್ರಶಾಂತ್ ಪಾಣೆಮಂಗಳೂರು, ಸುನೀಲ್ ಪಾಣೆಮಂಗಳೂರು, ಕರುಣಾಕರ ಮೆಲ್ಕಾರ್ ಹಾಗೂ ಸಂಘಟನೆಯ ಕಾರ್ಯಕರ್ತರು, ಸದಸ್ಯರು ಉಪಸ್ಥಿತರಿದ್ದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…