pic: Internet
ವ್ಯಕ್ತಿಯೋರ್ವ ಅಂತ್ಯಕ್ರಿಯೆಗೆ ಬೇಕಾದ ಮಡಿಕೆ, ಬಿಳಿಬಟ್ಟೆ, ಊದುಬತ್ತಿ ಮೊದಲಾದ ವಸ್ತುಗಳನ್ನು ಸ್ಮಶಾನಕ್ಕೆ ತಂದು, ಅಲ್ಲಿಂದಲೇ ಅತ್ತೆಗೆ ಕಾಲ್ ಮಾಡಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಿ.ಸಿ.ರೋಡಿನ ರಾಜೇಶ್ (35) ಸಾವನ್ನಪ್ಪಿದಾತ. ಬಿ.ಸಿ.ರೋಡಿನ ಕೈಕುಂಜೆಯ ಹಿಂದೂ ರುದ್ರಭೂಮಿಯಲ್ಲಿ ಸೋಮವಾರ ಬೆಳಿಗ್ಗೆ ಘಟನೆ ನಡೆದಿದೆ. ಜೀವನದಲ್ಲಿ ಜಿಗುಪ್ಸೆಗೊಂಡು ಈ ಕೃತ್ಯ ಎಸಗಿರುವ ಈತ, ಪತ್ನಿ, ಇಬ್ಬರು ಮಕ್ಕಳನ್ನು ಹೊಂದಿದ್ದಾನೆ.
ಅಂತ್ಯಕ್ರಿಯೆಗೆ ಬೇಕಾದ ಮಡಿಕೆ, ಬಿಳಿಬಟ್ಟೆ ಊದುಬತ್ತಿ ಮೊದಲಾದ ವಸ್ತುಗಳನ್ನು ಸ್ಮಶಾನಕ್ಕೆ ತಂದಿರಿಸಿ ಅಲ್ಲಿಂದಲೇ ತನ್ನ ಅತ್ತೆಗೆ ದೂರವಾಣಿ ಕರೆ ಮಾಡಿ ತಾನು ಸಾಯುವುದಾಗಿ ತಿಳಿಸಿ ಸ್ಮಶಾನದ ಮೇಲ್ಛಾವಣಿಯ ಕಬ್ಬಿಣದ ರಾಡಿಗೆ ನೇಣು ಬಿಗಿದು ಈ ಕೃತ್ಯ ಎಸಗಿದ್ದಾನೆ. ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ತೆರಳಿ ಶವದ ಮಹಜರು ನಡೆಸಿದ್ದು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)