• ಡಾ.ಎ.ಜಿ.ರವಿಶಂಕರ್

www.bantwalnews.com

ಜಾಹೀರಾತು

ಕಲ್ಲು ಸಕ್ಕರೆ ಸಾಧಾರಣವಾಗಿ ಎಲ್ಲರ ಮನೆಯಲ್ಲೂ ಇರುತ್ತದೆ. ಯಾವುದಕ್ಕೆ  ಅಲ್ಲದಿದ್ದರೂ ಮಕ್ಕಳು ಹಟ ಮಾಡಿದಾಗ ಕೊಡಲಿಕ್ಕಾದೀತು ಎಂದು ಇಟ್ಟುಕೊಳ್ಳುವವರೂ  ಇರುತ್ತಾರೆ. ಆದರೆ ಹಲವಾರು ಸಂದರ್ಭಗಳಲ್ಲಿ ಇದು ಬಹು ಸರಳ ಹಾಗು ಉತ್ತಮ ಫಲದಾಯಕ ಔಷಧವಾಗಿ ಕೆಲಸ ಮಾಡುತ್ತದೆ .

  1. ಬಿಸಿಲಿನಲ್ಲಿ ಬಂದು ಅತಿಯಾದ ಬಾಯಾರಿಕೆ ಹಾಗು ದಣಿವು ಆದಾಗ ಒಂದು ತುಂಡು ಕಲ್ಲು ಸಕ್ಕರೆಯನ್ನು ಬಾಯಲ್ಲಿ ಹಾಕಿ ಚಪ್ಪರಿಸಬೇಕು.
  2. ಮಧುಮೇಹದ ರೋಗಿಗಳಲ್ಲಿ ಅಕಸ್ಮಾತ್ತಾಗಿ ಸಕ್ಕರೆಯ ಅಂಶ ಕಡಿಮೆಯಾದಾಗ ಕಲ್ಲುಸಕ್ಕರೆಯನ್ನು  ಜಗಿಯಬೇಕು ಅಥವಾ ಹುಡಿಮಾಡಿ ನೀರಿನಲ್ಲಿ ಕರಗಿಸಿ ಕುಡಿಸಬೇಕು
  3. ಗಂಟಲು ಒಣಗಿ ಸ್ವರದ ಇಂಪು ಹೋದಾಗ ಕಲ್ಲುಸಕ್ಕರೆಯನ್ನು ಚಪ್ಪರಿಸಬೇಕು.
  4. ಹಾಗೆಯೇ ಗಂಟಲು ತುರಿಸಿ ಒಣಕೆಮ್ಮು ಬರುತ್ತಿದ್ದರೆ ಕೂಡಾ ಕಲ್ಲುಸಕ್ಕರೆಯನ್ನು ಚಪ್ಪರಿಸಿದರೆ ಕೆಮ್ಮು ವಾಸಿಯಾಗುತ್ತದೆ.
  5. ಗಾಯ ಅಥವಾ ಹುಣ್ಣಿನ ಮೇಲೆ ಕಲ್ಲುಸಕ್ಕರೆ ಪುಡಿಯನ್ನು ಹಾಕಿ ಬ್ಯಾಂಡೇಜ್ ಮಾಡಿದರೆ ಗಾಯ ಸೋಂಕು ರಹಿತವಾಗಿ ಬೇಗನೆ ವಾಸಿಯಾಗುತ್ತದೆ.
  6. ಗಾಯದಿಂದ ರಕ್ತ ಸೋರುತ್ತಿದ್ದರೆ ಕಲ್ಲುಸಕ್ಕರೆ ಹುಡಿಯನ್ನು ಚಿಮುಕಿಸಬೇಕು ಆಟವಾ ತೆಳ್ಳಗಿನ ಬಟ್ಟೆಯಲ್ಲಿ ಇಟ್ಟು ಗಾಯದ ಮೇಲೆ ಕಟ್ಟಬೇಕು.
  7. ಅತಿಯಾದ ಬಿಸಿ ಪದಾರ್ಥ ಅಥವಾ ಅತಿಯಾದ ಖಾರ ಪದಾರ್ಥಗಳನ್ನು ತಿಂದು ಬಾಯಿ ಹಾಗು ನಾಲಿಗೆ ಉರಿ ಬರುತ್ತಿದ್ದರೆ ಕಲ್ಲುಸಕ್ಕರೆಯನ್ನು ಚಪ್ಪರಿಸಬೇಕು.
  8. ಕಲ್ಲುಸಕ್ಕರೆ ಮತ್ತು ಈರುಳ್ಳಿ ರಸದ ಮಿಶ್ರಣವನ್ನು ಸೇವಿಸುವುದರಿಂದ ಮೂತ್ರಕೋಶದ ಕಲ್ಲು ನಿವಾರಣೆಯಾಗುತ್ತದೆ.
  9. ಕಲ್ಲು ಸಕ್ಕರೆಯನ್ನು ತಣ್ಣಗಿನ ನೀರಿನಲ್ಲಿ ಕರಗಿಸಿ ಕುಡಿಯುವುದರಿಂದ ಮೂಗಿನಿಂದ ಬರುವ ರಕ್ತಸ್ರಾವ ಕಡಿಮೆಯಾಗುತ್ತದೆ.
  10. ಮಿತವಾದ ಕಲ್ಲು ಸಕ್ಕರೆಯ ಬಳಕೆಯು ಮೆದುಳಿಗೆ ಉತ್ತಮ ಶಕ್ತಿದಾಯಕವಾಗಿದೆ.
  11. ಕಲ್ಲುಸಕ್ಕರೆಯನ್ನು ಹುಡಿಮಾಡಿ ಬಾದಾಮಿ ಎಣ್ಣೆಯಲ್ಲಿ ಕಲಸಿ ಶರೀರಕ್ಕೆ ಹಚ್ಚುವುದರಿಂದ ಶರೀರದ ಸತ್ತ ಚರ್ಮವು ತೊಲಗಿ ಚರ್ಮ ನುಣುಪಾಗಿ ಕಾಂತಿಯುತವಾಗುತ್ತದೆ.
  12. ಕಾಲಿನ ಹಿಮ್ಮಡಿ ಸೀಳಿ ನೋವಿನಿಂದ ಕೂಡಿದ್ದರೆ ಕಲ್ಲುಸಕ್ಕರೆಯ ಪಾಕ ಮಾಡಿ ಆರಿದ ನಂತರ ಹಿಮ್ಮಡಿಗೆ ಹಚ್ಚಬೇಕು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.