ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅವರ ಮುಂದಾಳತ್ವದಲ್ಲಿ ನಡೆಯುತ್ತಿರುವ ಬಂಟ್ವಾಳದ ಪರಿವರ್ತನೆಗೆ ಗ್ರಾಮದೆಡೆಗೆ ಬಿಜೆಪಿ ನಡಿಗೆ ಪಾದಯಾತ್ರೆ ಆರನೇ ದಿನವಾದ ಶುಕ್ರವಾರ ಬೆಳಗ್ಗೆ ಮುಲ್ಕಾಜೆಮಾಡದಲ್ಲಿ ವಂದೇ ಮಾತರಂ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾಯಿತು.
ಪಾದಯಾತ್ರೆದೇವಸ್ಯಪಡೂರು ಮಾರ್ಗವಾಗಿ ಅಲ್ಲಿಪಾದೆ ಪ್ರವೇಶಿಸಿತು. ಅವರನ್ನು ಅಲ್ಲಿಪಾದೆಯಲ್ಲಿ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಆತ್ಮೀಯವಾಗಿ ಸ್ವಾಗತಿಸಲಾಯಿತು. ಅಲ್ಲಿಪಾದೆ ಶ್ರೀರಾಮ ಭಜನ ಮಂದಿರದಲ್ಲಿ ಗ್ರಾಮಸ್ಥರೊಡನೆ ಸಮಾಲೋಚಿಸಿ ಮದ್ಯಾಹ್ನ ಭೋಜನ ವಿರಾಮ ಬಳಿಕ ಪೂಪಾಡಿಕಟ್ಟೆ, ಬೀಯಪಾದೆ ಮಾರ್ಗವಾಗಿ ಸರಪಾಡಿಗೆ ಸಾಗಿತು.
ಈ ಸಂದರ್ಭದಲ್ಲಿ ಕ್ಷೇತ್ರಅಧ್ಯಕ್ಷ ದೇವದಾಸ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ,ಮೋನಪ್ಪ ದೇವಸ್ಯ , ರಾಜ್ಯ ಬಿಜೆಪಿ ಸಹವಕ್ತಾರೆ ಸುಲೋಚನಾ ಜಿ.ಕೆ. ಭಟ್, ಜಿ.ಪಂ ಸದಸ್ಯರಾದ ತುಂಗಪ್ಪ ಬಂಗೇರ, ಕಮಲಾಕ್ಷಿಪೂಜಾರಿ, ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ, ಪ್ರಮುಖರಾದ ಸಚ್ಚಿದಾನಂದ ಶೆಟ್ಟಿ,ವಿಜಯ ರೈ, ದೇವಪ್ಪ ಪೂಜಾರಿ, ದಿನೇಶ್ ಭಂಡಾರಿ, ಸೀತರಾಮ ಪೂಜಾರಿ, ರಮಾನಾಥರಾಯಿ, ಗಣೇಶ್ರೈ ಮಾಣಿ, ದಿನೇಶ್ಅಮ್ಟೂರು, ರೋನಾಲ್ಡ್ ಡಿ ಸೋಜಾ, ಶಶಿಕಾಂತ ಶೆಟ್ಟಿ, ಶಿವಪ್ಪ ಗೌಡ ನಿನ್ನಿಕಲ್ಲು, ನಂದರಾಮ ರೈ, ಪುರುಷೋತ್ತಮ ಶೆಟ್ಟಿ ಬಾರೆಕ್ಕಿನಡೆ, ವಸಂತ ಅಣ್ಣಳಿಕೆ, ಸಂತೋಷ್ರಾಯಿಬೆಟ್ಟು, ಸಂಪತ್ಕೋಟ್ಯಾನ್, ಲೋಕೇಶ ಭರಣಿ, ಸುರೇಶ್ಕೊಟ್ಯಾನ್,ಮೋಹನ್ಕೊಟ್ಟಾರಿ, ಲೋಹಿತ್, ಪುರಸಭಾ ಶಕ್ತಿ ಕೇಂದ್ರದ ಮಹೇಶ್ ಶೆಟ್ಟಿ,ಗುರುದತ್ ನಾಯಕ್, ಜಗದೀಶ್ ಭಂಡಾರಿ, ಲೀಲಾವತಿ, ದಯಾನಂದಶೆಟ್ಟಿ, ವಿಜಯ ನಾವೂರು,ಧನಂಜಯ ಶೆಟ್ಟಿ ಸರಪಾಡಿ ಶಾಂತವೀರ ಪೂಜಾರಿ,ರಾಮಕೃಷ್ಣ ಮಯ್ಯ, ವಿದ್ಯಾ,ವೇದಾವತಿ ಕೂಡಿಬಲು,ವಿಮಲಾ, ಶಕುಂತಲಾ, ರಾಜೀವಿ,ಧರಣೇಂದ್ರ ಜೈನ್, ಪುರುಷೋತ್ತಮ ಮಜಲು, ಶೀಲಾ, ಸದಾನಂದ ಗೌಡ, ಜನಾರ್ದನ, ಶೇಖರ ಪೂಜಾರಿ, ತಾರಾವತಿ, ಪ್ರೇಮ ನಾಯ್ಕ್, ಮನೋಜ್ ಕಳ್ಳಿಗೆ, ಹರೀಶ್ ಮೈರಾನ್ಪಾದೆ, ವಿಠಲ ಕೋಟ್ಯಾನ್, ಸಂಪತ್ಕುಮಾರ್, ವಿಲ್ಫ್ರೆಡ್ ವಿನ್ಸೆಂಟ್ತಾವ್ರೋ,ದೇವೇಂದ್ರ ಕೋಟ್ಯಾನ್, ಸೂರಜ್,ಮಾಧವ, ಶ್ರೀನಿವಾಸ್ ಮೇಸ್ತ್ರಿ,ರತನ್ ಕುಮಾರ್, ರವಿ,ಜಯಾನಂದ,ಹರೀಶ್ ಮತ್ತಿತರರು ಭಾಗವಹಿಸಿದ್ದರು.
ಜ. 20ರಂದು ಪಾದಯಾತ್ರೆಯ 7ನೇ ದಿನ ಸರಪಾಡಿಯಿಂದ ಹೊರಟು ಕಡೇಶಿವಾಲಯ, ಬರಿಮಾರು, ಪೆರಾಜೆ, ಮಾಣಿ, ವಿಟ್ಲಮುಡ್ನೂರು, ಅನಂತಾಡಿ, ವೀರಕಂಭ ಗ್ರಾಮಗಳಲ್ಲಿ ಸಂಚರಿಸಲಿದೆ. ರಾತ್ರಿ ವೀರಕಂಭದಲ್ಲಿ ಬಹಿರಂಗ ಸಭೆ ನಡೆಯಲಿದ್ದು, ಕಾರ್ಕಳ ಶಾಸಕ ಸುನೀಲ್ ಕುಮಾರ್ ಭಾಗವಹಿಸುವರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…