ಬಂಟ್ವಾಳ

ಅಮಾಯಕರ ಬಂಧನ: ಎಸ್.ಡಿ.ಪಿ.ಐ. ಮುಖಂಡರ ಆರೋಪ

ಕಲ್ಲಡ್ಕದಲ್ಲಿ ಡಿಸೆಂಬರ್ 26ರಂದು ಕೇಶವ ಎಂಬವರ ಮೇಲೆ ನಡೆದ ಕೊಲೆಯತ್ನ ಪ್ರಕರಣದಲ್ಲಿ ಬಂಧಿತ ನೌಫಲ್, ಮಹಮ್ಮದ್ ಇಕ್ಬಾಲ್ ಮತ್ತು ನಿಝಾಮ್ ಅಮಾಯಕರು, ಅವರನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹೇಳಿದೆ.

ಜಾಹೀರಾತು

ಪುರಸಭಾ ಸದಸ್ಯರೂ ಆಗಿರುವ ಎಸ್.ಡಿ.ಪಿ.ಐ ಮುಖಂಡ ಮೊನೀಶ್ ಆಲಿ ಈ ಕುರಿತು ಗುರುವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೌಫಲ್ ನನ್ನು 28ರಂದು ಮಹಮ್ಮದ್ ಇಕ್ಬಾಲ್ ಮತ್ತು ಅವರ ಮಗ ನಿಜಾಮ್ ನನ್ನು 30ರಂದು ಬಂಧಿಸಲಾಗಿದ್ದರೂ ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇವರ ಸಂಬಂಧಿಕ ಫಾರೂಕ್ ಈ ಕೃತ್ಯದಲ್ಲಿ ಶಾಮೀಲಾಗಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ಪೊಲೀಸರಿಗೆ ಫಾರೂಕ್ ಸಿಕ್ಕದೇ ಇದ್ದಾಗ, ಇವರನ್ನು ಕೇಸಿನಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದರು.

ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಎಸ್‌ಡಿಪಿಐ ಅಧ್ಯಕ್ಷ ಶಾಹುಲ್ . ಮಾತನಾಡಿ, ಯಾವುದೇ ಘಟನೆಗಳು ನಡೆದರೆ ಪಕ್ಷದ ಹೆಸರನ್ನು ಕೆಲವೊಂದು ಮಾಧ್ಯಮಗಳಲ್ಲಿ ಅನಾವಶ್ಯಕವಾಗಿ ಸಂಬಂಧ ಕಲ್ಪಿಸುವ ಪ್ರಯತ್ನಗಳು ನಡೆಯುತ್ತಿದ್ದು, ಇದನ್ನು ಎಸ್‌ಡಿಪಿಐ ಖಂಡಿಸುತ್ತದೆ ಎಂದರು.

ಕೊಲೆಯತ್ನ ಪ್ರಕರಣವನ್ನು ನಾವು ಖಂಡಿಸುತ್ತೇವೆ. ಆದರೆ ಅಮಾಯಕರ ಬಂಧನ ಸಲ್ಲದು, ಈಗ ಬಂಧಿತರು ಘಟನೆ ನಡೆದ ಸಂದರ್ಭ ಅಲ್ಲಿರಲಿಲ್ಲ ಎಂದಾದ ಮೇಲೆ ಯಾಕೆ ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಪ್ರಶ್ನಿಸಿದ ಅವರು ಮುಂದಿನ ದಿನಗಳಲ್ಲಿ ಕಾನೂನು ರೀತಿಯಲ್ಲಿ ಹಾಗೂ ಪ್ರತಿಭಟನೆ ಮೂಲಕ ಹೋರಾಟ ನಡೆಸುತ್ತೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಅಬ್ದುಲ್ ಸತ್ತಾರ್, ಇಕ್ಬಾಲ್, ನಝೀರ್ ಮತ್ತಿತರರು ಇದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.