ಸಿನಿಮಾ

ನರಹರಿ ಪರ್ವತದಲ್ಲಿ ದಗಲ್‌ಬಾಜಿಗಳ ಲಗ್ಗೆ

www.bantwalnews.com

news by – M.N.Kumar, Melkar

ಜಾಹೀರಾತು


ಸಾವಿರ ಅಡಿ ಎತ್ತರದ, ಭೂಲೋಕದ ಕೈಲಾಸವೆಂದೇ ಜನಜನಿತವಾದ ನರಹರಿ ಪರ್ವತವನ್ನೂ ಏರಿ ತಮ್ಮ ದಗಲ್‌ಬಾಜಿತನವನ್ನು ಪ್ರದರ್ಶಿಸುತ್ತಿದ್ದಾರೆ ಇವರು.

ಇದು ರಿಯಲ್ ಅಲ್ಲ, ಇದೊಂದು ರೀಲ್‌ನ ಕ್ಲೈಮ್ಯಾಕ್ಸ್. ದಗಲ್‌ಬಾಜಿ ತುಳು ಚಿತ್ರ ತಂಡು ನರಹರಿ ಪರ್ವತದಲ್ಲಿ ಸೆಟ್‌ಹಾಕಿ ಮದುವೆಯ ದೃಶ್ಯವುಳ್ಳ ಸಿನಿಮಾ ಕ್ಲೈಮ್ಯಾಕ್ಸ್ ಅನ್ನು ಚಿತ್ರಿಸಿಕೊಂಡರು.

ಭಾರೀ ಹೊಡೆದಾಟದ ದೃಶ್ಯವನ್ನು ಪರ್ವತದ ತುತ್ತ ತುದಿಯಲ್ಲಿ ಚಿತ್ರೀಕರಿಸಲಾಯಿತು.

ಸಾಹಸ ನಿರ್ದೆಶಕ ಉಗ್ರಂ ಖ್ಯಾತಿಯ ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನದಲ್ಲಿ ಮೈ ನವಿರೇಳಿಸುವ ಸಾಹಸ ದೃಶ್ಯಗಳನ್ನು, ಛಾಯಾಗ್ರಾಹಕ ಕೆ.ಎಂ.ವಿಷ್ಣುವರ್ಧನ್ ಚಿತ್ರಿಕರಿಸುತ್ತಿದ್ದು ಚಿತ್ರದಲ್ಲಿ ನಟ ವಿಘ್ನೇಶ್, ಸುರೇಶ್ ಅಂಚನ್, ನಾಯಕಿ ರಶ್ಮಿಕಾ ಹಾಗೂ ತುಳುನಾಡಿನ ದಿಗ್ಗಜರುಗಳಾದ ನವೀನ್. ಡಿ .ಪಡೀಲ್, ಅರವಿಂದ್ ಬೊಳಾರು. ಬೋಜರಾಜ್ ವಾಮಂಜೂರು, ಸತೀಶ್ ಬಂದಲೆ, ದೀಪಕ್ ರೈ ಪಾಣಾಜೆ, ಪ್ರಕಾಶ್ ತೂಮಿನಾಡ್, ಉಮೇಶ್ ಮಿಜಾರ್ ಮೊದಲಾದವರಿದ್ದಾರೆ.

ಸುನೀಲ್ ನೆಲ್ಲಿಗುಡ್ಡೆ, ಚಂದ್ರಶೇಖರ್ ಸಿದ್ದಕಟ್ಟೆ, ರೂಪ ವರ್ಕಾಡಿ, ಪ್ರಿಯ ಹೆಗ್ಡೆ ಚಿತ್ರೀಕರನದಲ್ಲಿ ಭಾಗವಹಿಸಿದ್ದರು. ಕಥೆ ,ಚಿತ್ರಕಥೆ ,ಸಂಭಾಷಣೆ, ಸಾಹಿತ್ಯ ಸುರೇಶ್ ಅಂಚನ್ ಅವರದ್ದು. ಈ ಚಿತ್ರದ ನಿರ್ದೇಶಕರು ವಿ.ಎಸ್ ಪ್ರಶಾಂತ್. ಚಿತ್ರದ ನಿರ್ಮಾಪಕರು ಸಂತೋಷ್ ಶೆಟ್ಟಿ ಕುಂಬ್ಲೆ. ಸಂಗೀತ ಆರ್.ಡಿ.ವರ್ಮನ್ ಮತ್ತು ಸಂದೇಶ ಬಾಬು ಅವರು ನೀಡಿದ್ದಾರೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

22 minutes ago