ಕವರ್ ಸ್ಟೋರಿ

ಜನರಿಗಾಗಿ ನದಿ ದಾಟುವ ದೈವಗಳು

  • ಚಂದ್ರಶೇಖರ ಪಾತೂರು

www.bantwalnews.com

ಜಾಹೀರಾತು

ಭಾಷಾವಾರು ಪ್ರಾಂತ್ಯ ವಿಂಗಡನೆಯ ಸಂದರ್ಭದಲ್ಲಿ ಕೇರಳ ರಾಜ್ಯದ ಭಾಗವಾಗಿ ಹೋದ ಕಾಸರಗೋಡು ಜಿಲ್ಲೆಯ ಹಲವಾರು ಧಾರ್ಮಿಕ ಆಚರಣೆಗಳು ದಕ್ಷಿಣ ಕನ್ನಡ ಜಿಲ್ಲೆಯ ಆಚರಣೆಗೆ ಸಾಮ್ಯತೆಯನ್ನು ಹೊಂದಿವೆ. ಕಾಸರಗೋಡು ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಪ್ರಚಲಿತದಲ್ಲಿರುವ ಆರಾಧಾನಾ ಸಂಪ್ರದಾಯ ತೆಯ್ಯಂ. ಇದು ನಮ್ಮಲ್ಲಿ ಪ್ರಚಲಿತದಲ್ಲಿರುವ ದೈವರಾಧನೆಯನ್ನು ಹೋಲುವ ಕಲಾರೂಪ. ತುಳುನಾಡಿನ ದೈವಗಳಿಗೆ ಪಾಡ್ದನವಿದ್ದರೆ ಇಲ್ಲಿತೋಟ್ಟಂ ಎಂಬ ಪ್ರಕಾರವಿದೆ.

ಕಾಞಂಗಾಡ್ ಕಾಸರಗೋಡು ಜಿಲ್ಲಾ ಕೇಂದ್ರದಿಂದ 28 ಕಿ.ಮೀ. ದೂರದಲ್ಲಿದೆ. ಮಲಯಾಳಂ ಮಾತೃ ಭಾಷೆಯ ನೆಲವಾದರೂ ಇಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬಗಳು ಸಾಕಷ್ಟು ಸಂಖ್ಯೆಯಲ್ಲಿ ನೆಲೆಸಿದ್ದು ತುಳು, ಕೊಂಕಣಿ ಹಾಗೂ ಕನ್ನಡ ಭಾಷೆಗಳನ್ನಾಡುವವರು ಕಾಣಸಿಗುತ್ತಾರೆ. ನಿತ್ಯಾನಂದ ಸ್ವಾಮಿ ಧ್ಯಾನಸ್ಥರಾಗಿದ್ದ ಗುಹೆಗಳು, ಹೊಸದರ್ಗ ಕೋಟೆ ಇಲ್ಲಿನ ಪ್ರಮುಖ ಆಕರ್ಷಣೆ.

ಕಾಞಂಗಾಡ್ ಪೇಟೆಯ ಹೊರವಲಯದಲ್ಲಿರುವಅರೆಯಿ ಎಂಬ ಪ್ರಶೇದವು ಭತ್ತ, ತೆಂಗು ಹಾಗೂ ಬಾಳೆಯ ಬೆಳೆಗೆ ಪ್ರಸಿದ್ಧವಾಗಿದೆ. ಅರೆಯಿ ಸಮೀಪದ ಕಾರ್ತಿಕ ಎಂಬಲ್ಲಿ ಪ್ರತೀವರ್ಷ ನಡೆಯುವತೈಯಂ ರಾಜ್ಯದಲ್ಲೇ ವಿಶಿಷ್ಠತೆಯಿಂದ ಕೂಡಿದೆ. ಇಲ್ಲಿ ಆರಾಧನೆಗೊಂಡ ದೈವಗಳು ನದಿಯನ್ನು ದೋಣಿಯ ಮೂಲಕ ದಾಟಿಅರೆಯಿ ಯಲ್ಲಿರುವ ದೈವವನ್ನು ಭೇಟಿ ಮಾಡುವ ಸಂಪ್ರದಾಯವೇ ಇದಕ್ಕೆ ಕಾರಣ.

ಸಾಮಾನ್ಯವಾಗಿ ವೀರರ ಆರಾಧನೆಯ ಪ್ರತೀಕವಾಗಿ ರೂಪು ಪಡೆಯುವತೆಯ್ಯಂ ಪ್ರದೇಶದಲ್ಲೂ ಇದೇ ಹಿನ್ನಲೆಯನ್ನು ಹೊಂದಿದೆ ಎಂದು ಕ್ಷೇತ್ರದ ಮುಖ್ಯ ಸ್ಥರಾದ ಕುಂಞಿ ಕೃಷ್ಣನ್ ಅಭಿಪ್ರಾಯ ಪಡುತ್ತಾರೆ. ಭತ್ತವನ್ನೇ ಪ್ರಧಾನ ಬೆಳೆಯನ್ನಾಗಿ ಬೆಳೆಯುತ್ತಿದ್ದ ಇಲ್ಲಿನ ರೈತರಿಗೆ ಪ್ರತೀ ವರ್ಷ ನೆರೆನೀರು ನುಗ್ಗಿ ಬೆಳೆಹಾನಿ ಸಂಭವಿಸುತ್ತಿದ್ದ ಸಂದರ್ಭ ರೈತರ ರಕ್ಷಣೆಗಾಗಿ ದೈವವು ಇಲ್ಲಿ ನೆಲೆಯಾಯಿತು ಎಂಬುದು ನಂಬಿಕೆ. ಹೊಳೆಯ ಆಚೆ ದಡದಲ್ಲಿರುವ ಅರಸರಲ್ಲಿ ಪ್ರಜೆಗಳು ತಮ್ಮ ಕಷ್ಟಗಳನ್ನು ನೇರವಾಗಿ ಹೇಳಿಕೊಳ್ಳಲಾಗದ ಸಂದರ್ಭದಲ್ಲಿ ಅರಮನೆಯ ದೈವಗಳ ಜತೆ ಇಲ್ಲಿನ ದೈವಗಳ ಭೇಟಿಯ ಸಂದರ್ಭ ಕಷ್ಟ ಸುಖಗಳನ್ನು ಹೇಳಿಕೊಳ್ಳವ ಸಂಪ್ರದಾಯವಿತ್ತು. ಸಂಬಂಧ ಇಂದೂ ಮುಂದುವರಿದಿದೆ ಎಂದು ಕುಂಞಿಕೃಷ್ಣನ್ ಹೇಳುತ್ತಾರೆ.

ಪ್ರತೀ ವರ್ಷ ತುಲಾ ಮಾಸ 10 ಮತ್ತು 11 ರಂದು ನಡೆಯುವ ಕಳಿಯಾಟ್ಟ ಉತ್ಸವವನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಭಕ್ತ ಜನರು ಸೇರುತ್ತಾರೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

54 seconds ago