ಪಾಕಶಾಲೆಯೇ ವೈದ್ಯಶಾಲೆ

ಎಸಿಡಿಟಿಯೇ? ಸಕ್ಕರೆ ಸೇರಿಸಿ ಹಾಲಿನ ಕೆನೆ ಸೇವಿಸಿ

  • ಡಾ.ಎ.ಜಿ.ರವಿಶಂಕರ್

www.bantwalnews.com

ಜಾಹೀರಾತು

ಹಾಲಿನ ಕೆನೆ ಎಂದಾಕ್ಷಣ ಗಟ್ಟಿ ಮೊಸರಿನ ತಯಾರಿ ಅಥವಾ ಬೆಣ್ಣೆ ನೆನಪಾಗುತ್ತದೆ. ಆದರೆ ಇದು ಕೆನೆ ರೂಪದಲ್ಲಿರುವಾಗಲೇ ಹಲವಾರು ಸಂದರ್ಭಗಳಲ್ಲಿ ಔಷಧವಾಗಿ ಉಪಯೋಗಕ್ಕೆ ಬರುತ್ತದೆ.

  1. ಹಾಲಿನ ಕೆನೆಯು ಅತ್ಯಂತ ಸತ್ವಭರಿತವಾಗಿದ್ದು ವ್ಯಕ್ತಿಯ ಶರೀರ ತೂಕವನ್ನು ಹೆಚ್ಚಿಸಲು ಸಹಕರಿಸುತ್ತದೆ. ಪ್ರತಿನಿತ್ಯ ಹಾಲಿನ ಕೆನೆಗೆ ಸಕ್ಕರೆ ಸೇರಿಸಿ ತಿಂದರೆ ಶರೀರದ ತೂಕ ಅಧಿಕವಾಗುತ್ತದೆ.
  2. ಹಾಲಿನ ಕೆನೆಯನ್ನು ಸಕ್ಕರೆಯೊಂದಿಗೆ ಸೇರಿಸಿ ತಿಂದರೆ ಎಸಿಡಿತಿ ಸಮಸ್ಯೆಯು ಕಡಿಮೆಯಾಗುತ್ತದೆ.
  3. ಹಾಲಿನ ಕೆನೆಯನ್ನು ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
  4. ಹಾಲಿನ ಕೆನೆಯನ್ನು ಸೇವಿಸುವುದರಿಂದ ದೇಹದ ಮೂಳೆಗಳು ದ್ರುಢವಾಗುತ್ತವೆ.
  5. ಕಣ್ಣಿನ ರೆಪ್ಪೆಯಲ್ಲಿ ಕುರ ಮೂಡಿದಾಗ ಹಾಲಿನ ಕೆನೆಯನ್ನು ಕುರದ ಮೇಲೆ ಲೇಪಿಸಬೇಕು
  6. ಸುಟ್ಟ ಗಾಯದ ಮೇಲೆ ಹಾಲಿನ ಕೆನೆಯನ್ನು ಲೇಪಿಸಿದರೆ ಉರಿ ಹಾಗು ನೋವು ಕಡಿಮೆಯಾಗುತ್ತದೆ.
  7. ಚೇಳು,ಶತಪದಿ ಇತ್ಯಾದಿಗಳು ಕಡಿದಾಗ ಹಾಲಿನೆ ಕೆನೆಗೆ ಸ್ವಲ್ಪ ಅರಸಿನ ಪುಡಿ ಸೇರಿಸಿ ಲೇಪಿಸಬೇಕು.
  8. ಮುಖದ ಮೇಲೆ ಹಾಲಿನ ಕೆನೆಯನ್ನು ಲೇಪಿಸುವುದರಿಂದ ಮುಖದ ಕಾಂತಿ ಅಧಿಕವಾಗುತ್ತದೆ.
  9. ಒಣ ಚರ್ಮದಿಂದಾಗಿ ಚರ್ಮವು ಬಿರಿಯುವುದಿದ್ದರೆ ಹಾಲಿನ ಕೆನೆಯನ್ನು ಮೈ ಮೇಲೆ ಹಚ್ಚಬೇಕು.
  10. ಬಿಸಿ ಪದಾರ್ಥಗಳನ್ನು ಕುಡಿದು ತುಟಿ ಸುಟ್ಟರೆ ,ತುಟಿಯಮೇಲೆ ಹಾಲಿನ ಕೆನೆಯನ್ನು ಹಚ್ಚಬೇಕು.

ಜಾಹೀರಾತು

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.