ಕೆ ಎಂ ಎಫ್ ತರಬೇತಿ ಕೇಂದ್ರ, ಮೈಸೂರು, ದ.ಕ ಸಹಕಾರಿ ಹಾಲು ಉತ್ವಾದಕರ ಒಕ್ಕೂಟ ಮತ್ತು ಮಾಣಿ ಹಾಲು ಉತ್ವಾದಕರ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ 25 ಮತ್ತು 26ರಂದು ಎರಡು ದಿನಗಳ ಹೈನುರಾಸು ನಿರ್ವಹಣಾ ಕಾರ್ಯಕ್ರಮ ಕುಲಾಲ ಭವನ, ಮಾಣಿಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ದ.ಕ ಹಾಲು ಒಕ್ಕೂಟದ ನಿರ್ದೇಶಕರಾದ ಡಾ. ಕೆ.ಎಂ ಕೃಷ್ಣ ಭಟ್ ಉತ್ತಮ ತಳಿಯ ಹಸುಗಳನ್ನು ಸಾಕಿ ಗುಣಮಟ್ಟದ ಹಾಲನ್ನು ನೀಡುವಂತೆ ತಿಳಿಸಿ ರೈತ ಕಲ್ಯಾಣ ಟ್ರಸ್ಟನ ಚೆಕ್ ವಿತರಿಸಿದರು.
ಕಾರ್ಯಕ್ರಮವನ್ನು ಮಾಣಿ ಸಂಘದ ಅಧ್ಯಕರಾದ ಅರುಣ್ ಕುಮಾರ್ ರೈ ವಹಿಸಿದ್ದು ಬಾಲಕೃಷ್ಣ ಆಳ್ವ ಸ್ವಾಗತಿಸಿ, ಯಶವಂತ್ ಪ್ರಭು ವಂದಿಸಿದರು. ಕಾರ್ಯಕ್ರಮವನ್ನು ಒಕ್ಕೂಟದ ವಿಸ್ತರಣಾಧಿಕಾರಿ ಜಾವೆಟ್ ರೊನಾಲಿಯೋ ನಿರೂಪಿಸಿದರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)