ಫರಂಗಿಪೇಟೆ

ಅಮೆಮಾರ್: 27 ರಿಂದ ದಾರ್ಮಿಕ ಪ್ರವಚನ, ಜಶ್ನೇ ಮಿಲಾದ್ , ಮದರಸ ನೂತನ ಕಟ್ಟಡ ಉದ್ಘಾಟನೆ

 ಬದ್ರಿಯಾ ಮದರಸ ಮತ್ತು ಜುಮ್ಮಾ ಮಸೀದಿ ಅಮೆಮಾರ್ ಇದರ ಆಶ್ರಯದಲ್ಲಿ ನವಂಬರ್ 27 ರಿಂದ 29 ರವರೆಗೆ ಮೂರು ದಿವಸಗಳ ಕಾಲ ದಾರ್ಮಿಕ ಪ್ರವಚನ, 30 ರಂದು ಅಸರ್ ನಮಾಝ್ ನಂತರ ಮದ್ರಸಾ ಮತ್ತು ದರ್ಸ್ ವಿಧ್ಯಾರ್ಥಿಗಳ ಪ್ರತಿಭಾ ಕಾರ್ಯಕ್ರಮ “ಜಶ್ನೇ ಮಿಲಾದ್” ನಡೆಯಲಿರುವೂದು.

ಅಕ್ಟೋಬರ್ 1 ರಂದು ಜುಮಾ ನಮಾಝ್ ಬಳಿಕ ದಕ ಜಿಲ್ಲಾ ಖಾಝಿ ಯವರು ಅಲ್ ಬದ್ರಿಯಾ ಮದರಸ ಅಮೆಮಾರ್ ಇದರ ನೂತನ ಕಟ್ಟಡದ ಉದ್ಘಾಟನೆಯನ್ನು ಮಾಡಲಿದ್ದಾರೆ,

ಜಾಹೀರಾತು

ಸಮಸ್ತ ಕೇರಳ ಜಮ್ ಇಯ್ಯತುಲ್ ಉಲಮಾ ಉಪಾದ್ಯಕ್ಷ ಜಬಾರ್ ಉಸ್ತಾದ್ ಮಿತ್ತಬೈಲ್ ದುವಾ ಅಶಿರ್ವಚನ ಮಾಡಲಿದ್ದಾರೆ, ಮಸೀದಿ ಆಡಳಿತ ಸಮಿತಿ ಅದ್ಯಕ್ಷ ಉಮರಬ್ಬ ಎ.ಎಸ್.ಬಿ ಅದ್ಯಕ್ಷತೆ ವಹಿಸಲಿದ್ದಾರೆ ಬದ್ರಿಯಾ ಮಸೀದಿ ಅಮೆಮಾರ್ ಖತೀಬರು ಅಬೂಸ್ವಾಲಿಹ್ ಪೈಝಿ, ಮೊಹ್ಯುದ್ದೀನ್ ಹಸನಿ, ಆದಮ್ ಮದನಿ, ಇಮ್ರಾನ್ ದಾರಿಮಿ, ಅಬೂಬಕ್ಕರ್ ಮದನಿ, ದಾವೂದು ಅಝ್ಹರಿ, ಇಸ್ಮಾಯಿಲ್ ಯಮಾನಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಬದ್ರಿಯಾ ಜುಮ್ಮಾ ಮಸೀದಿ ಅಮೆಮಾರ್ ಇದರ ಪ್ರದಾನ ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.