ಬದ್ರಿಯಾ ಮದರಸ ಮತ್ತು ಜುಮ್ಮಾ ಮಸೀದಿ ಅಮೆಮಾರ್ ಇದರ ಆಶ್ರಯದಲ್ಲಿ ನವಂಬರ್ 27 ರಿಂದ 29 ರವರೆಗೆ ಮೂರು ದಿವಸಗಳ ಕಾಲ ದಾರ್ಮಿಕ ಪ್ರವಚನ, 30 ರಂದು ಅಸರ್ ನಮಾಝ್ ನಂತರ ಮದ್ರಸಾ ಮತ್ತು ದರ್ಸ್ ವಿಧ್ಯಾರ್ಥಿಗಳ ಪ್ರತಿಭಾ ಕಾರ್ಯಕ್ರಮ “ಜಶ್ನೇ ಮಿಲಾದ್” ನಡೆಯಲಿರುವೂದು.
ಅಕ್ಟೋಬರ್ 1 ರಂದು ಜುಮಾ ನಮಾಝ್ ಬಳಿಕ ದಕ ಜಿಲ್ಲಾ ಖಾಝಿ ಯವರು ಅಲ್ ಬದ್ರಿಯಾ ಮದರಸ ಅಮೆಮಾರ್ ಇದರ ನೂತನ ಕಟ್ಟಡದ ಉದ್ಘಾಟನೆಯನ್ನು ಮಾಡಲಿದ್ದಾರೆ,
ಸಮಸ್ತ ಕೇರಳ ಜಮ್ ಇಯ್ಯತುಲ್ ಉಲಮಾ ಉಪಾದ್ಯಕ್ಷ ಜಬಾರ್ ಉಸ್ತಾದ್ ಮಿತ್ತಬೈಲ್ ದುವಾ ಅಶಿರ್ವಚನ ಮಾಡಲಿದ್ದಾರೆ, ಮಸೀದಿ ಆಡಳಿತ ಸಮಿತಿ ಅದ್ಯಕ್ಷ ಉಮರಬ್ಬ ಎ.ಎಸ್.ಬಿ ಅದ್ಯಕ್ಷತೆ ವಹಿಸಲಿದ್ದಾರೆ ಬದ್ರಿಯಾ ಮಸೀದಿ ಅಮೆಮಾರ್ ಖತೀಬರು ಅಬೂಸ್ವಾಲಿಹ್ ಪೈಝಿ, ಮೊಹ್ಯುದ್ದೀನ್ ಹಸನಿ, ಆದಮ್ ಮದನಿ, ಇಮ್ರಾನ್ ದಾರಿಮಿ, ಅಬೂಬಕ್ಕರ್ ಮದನಿ, ದಾವೂದು ಅಝ್ಹರಿ, ಇಸ್ಮಾಯಿಲ್ ಯಮಾನಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಬದ್ರಿಯಾ ಜುಮ್ಮಾ ಮಸೀದಿ ಅಮೆಮಾರ್ ಇದರ ಪ್ರದಾನ ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…